ಇದೆಂಥಾ ಪದ್ಧತಿ! ದಲಿತ ಎನ್ನುವ ಕಾರಣಕ್ಕೆ ಊರಿನೊಳಗೆ ಬರದಂತೆ ತಡೆದ ಗ್ರಾಮಸ್ಥರು!
ಜನಪ್ರತಿನಿಧಿಗೂ ತಟ್ಟಿದ ಅಸ್ಪೃಶ್ಯತೆಯ ಬಿಸಿ. ಗ್ರಾಮಸ್ಥರ ಮಡಿವಂತಿಕೆಗೆ ಬೆಚ್ಚಿ ಬಿದ್ದರು ಜನನಾಯಕ. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ ನಾರಾಯಣ ಸ್ವಾಮಿಗೆ ಗ್ರಾಮಸ್ಥರು ಒಳ ಬರದಂತೆ ನಿರ್ಬಂಧ ಹೇರಿದ್ದಾರೆ. ಗ್ರಾಮದ ಗಡಿಯಲ್ಲೇ ಸಂಸದರ ಕಾರು ತಡೆದಿದ್ದಾರೆ. ಪಾವಗಡ ತಾಲೂಕಿನ ಪರಮನಹಳ್ಳಿ ಗೊಲ್ಲರಹಟ್ಟಿಯಲ್ಲಿ ಈ ಘಟನೆ ನಡೆದಿದೆ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ನಾರಾಯಣ ಸ್ವಾಮಿ ಬಂದಿದ್ದರು. ಈ ಗ್ರಾಮಕ್ಕೆ ಯಾವುದೇ ದಲಿತರಿಗೆ ಪ್ರವೇಶವಿಲ್ಲ.
ಜನಪ್ರತಿನಿಧಿಗೂ ತಟ್ಟಿದ ಅಸ್ಪೃಶ್ಯತೆಯ ಬಿಸಿ. ಗ್ರಾಮಸ್ಥರ ಮಡಿವಂತಿಕೆಗೆ ಬೆಚ್ಚಿ ಬಿದ್ದರು ಜನನಾಯಕ. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ ನಾರಾಯಣ ಸ್ವಾಮಿಗೆ ಗ್ರಾಮಸ್ಥರು ಒಳ ಬರದಂತೆ ನಿರ್ಬಂಧ ಹೇರಿದ್ದಾರೆ. ಗ್ರಾಮದ ಗಡಿಯಲ್ಲೇ ಸಂಸದರ ಕಾರು ತಡೆದಿದ್ದಾರೆ. ಪಾವಗಡ ತಾಲೂಕಿನ ಪರಮನಹಳ್ಳಿ ಗೊಲ್ಲರಹಟ್ಟಿಯಲ್ಲಿ ಈ ಘಟನೆ ನಡೆದಿದೆ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ನಾರಾಯಣ ಸ್ವಾಮಿ ಬಂದಿದ್ದರು. ಈ ಗ್ರಾಮಕ್ಕೆ ಯಾವುದೇ ದಲಿತರಿಗೆ ಪ್ರವೇಶವಿಲ್ಲ.