ದಳಪತಿಗಳ ಕೋಟೆಯಲ್ಲಿ ಮೋದಿ ರೋಡ್‌ ಶೋ... ಪ್ರಧಾನಿ ಕೊಂಡಾಡಿದ ಸಿಎಂ

ಮಂಡ್ಯ ಅಂದ್ರೆ ಇಂಡಿಯಾ ಎಂದು  ಗೆಜ್ಜಲಗೆರೆಯ ಬೃಹತ್ ಸಮಾವೇಶದಲ್ಲಿ  ಸಿಎಂ ಬಸವರಾಜ ಬೊಮ್ಮಾಯಿ  ಹೇಳಿದ್ದಾರೆ.

First Published Mar 12, 2023, 2:45 PM IST | Last Updated Mar 12, 2023, 2:45 PM IST

ಮೈಸೂರು- ಬೆಂಗಳೂರು ದಶಪಥ ಹೆದ್ದಾರಿ ಉದ್ಘಾಟನೆ ಬಳಿಕ  ಗೆಜ್ಜಲಗೆರೆಯ ಬೃಹತ್ ಸಮಾವೇಶದಲ್ಲಿ  ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದು,  ಮಂಡ್ಯ ಅಂದ್ರೆ ಇಂಡಿಯಾ,  ವಿರೋಧಿ ರಾಷ್ಟ್ರಗಳಲ್ಲಿನ ಜನ ಕೂಡ ಮೋದಿಯನ್ನು ಒಪ್ಪಿಕೊಂಡಿದ್ದಾರೆ ಅದಕ್ಕೆ ಮೋದಿಯವರನ್ನು ವಿಶ್ವನಾಯಕ ಎಂದು ಕರೆಯಲಾಗಿದೆ ಎಂದು ತಿಳೀಸಿದರು . 2014ರಲ್ಲಿ  ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಗೆ ಶಂಕುಸ್ಥಾಪನೆ ಹಾಕಿದ್ದು ಪ್ರಧಾನಿ ಮೋದಿಯವರು, ನಂತರ ಅದರ ಕಾಮಗಾರಿಯೂ ಅವರ ನೇತೃತ್ವದಲ್ಲಿ ಸಾಗಿತು. ಇದೀಗ ಉದ್ಘಾಟನೆಯಾಗುತ್ತಿದೆ ಎಂದು ಬೊಮ್ಮಾಯಿ ಹೇಳಿದರು.ಕಿಸಾನ್ ಸಮ್ಮಾನ್ ಯೋಜನೆಯಿಂದ ಮಂಡ್ಯದ 2 ಲಕ್ಷಕ್ಕೂ ಹೆಚ್ಚು ಜನ ಯೋಜನೆ ಲಾಭ ಪಡೆದಿದ್ದಾರೆ.ಮುಂದಿನ ದಿನಗಳಲ್ಲಿ ಬಿಜೆಪಿ ಬೆಂಬಲಿಸುವ ಮೂಲಕ ಆಶೀರ್ವದಿಸಿ ಎಂದರು. 
 

Video Top Stories