ಸಿಎಂ ಪುತ್ರನ ವಿಡಿಯೋ ವೈರಲ್: ಯತೀಂದ್ರ ಮಾತಾಡಿದ್ದು ಪೊಲೀಸ್ ಇಲಾಖೆ ವರ್ಗಾವಣೆ ಬಗ್ಗೆನಾ..?

ಪೊಲೀಸ್ ಇಲಾಖೆ ವರ್ಗಾವಣೆ ಪಟ್ಟಿಯಲ್ಲಿ ಬಯಲಾಯ್ತು ಸತ್ಯ..?
71 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಪಟ್ಟಿಯಲ್ಲಿ ವಿವೇಕಾನಂದನ ಹೆಸರು
ಮೈಸೂರಿನ ವಿವಿಪುರಂ ಠಾಣೆಗೆ ವರ್ಗಾವಣೆ ಆಗಿರುವ ವಿವೇಕಾನಂ

First Published Nov 18, 2023, 12:05 PM IST | Last Updated Nov 18, 2023, 12:05 PM IST

ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ(Siddaramaiah) ವರ್ಗಾವಣೆ(Transfer) ಬಗ್ಗೆ ಮಾತನಾಡಿರುವ ವಿಡಿಯೋ ವೈರಲ್‌ ಆಗಿದ್ದು, ಇದು ಪೊಲೀಸ್‌ ಇಲಾಖೆಗೆ ಸಂಬಂಧಿಸಿದ್ದು ಎನ್ನಲಾಗ್ತಿದೆ. ಈ ವಿಡಿಯೋದಲ್ಲಿಅವರು ವಿವೇಕಾನಂದ(Vivekananda) ಎಂಬ ವ್ಯಕ್ತಿಯ ಹೆಸರನ್ನು ಹೇಳಿದ್ದು,  ಯಾರು ಎಂಬ ಪ್ರಶ್ನೆ ಎಲ್ಲಾರನ್ನು ಕಾಡ ತೊಡಗಿದೆ. ವಿವೇಕಾನಂದ ಬಿಇಓ ಎಂದು ಸಿದ್ದರಾಮಯ್ಯ ಸಮಜಾಯಿಷಿ ನೀಡಿದ್ದಾರೆ. ಆದರೆ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಪಟ್ಟಿಯಲ್ಲಿ ಬಯಲಾಗಿದ್ದೇ ಬೇರೆಯಾಗಿದೆ. ಪೊಲೀಸ್ ಇಲಾಖೆ ವರ್ಗಾವಣೆ ಪಟ್ಟಿಯಲ್ಲಿ ಸತ್ಯ ಬಯಲಾಗಿದ್ದು, 71 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಪಟ್ಟಿಯಲ್ಲಿ ವಿವೇಕಾನಂದನ ಹೆಸರು ಇದೆ. ಮೈಸೂರಿನ ವಿವಿಪುರಂ ಠಾಣೆಗೆ ವಿವೇಕಾನಂದ ವರ್ಗಾವಣೆ ಆಗಿದ್ದಾರೆ. ರಾಜ್ಯ ಗುಪ್ತವಾರ್ತೆಯಿಂದ ವಿವಿಪುರಂ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಅದೇ ಪಟ್ಟಿಯಲ್ಲಿದೆ ಮೈಸೂರು ಜಿಲ್ಲೆಯ 4 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ. ಅಂದು ಯತೀಂದ್ರ ಬಾಯಲ್ಲಿ ಬಂದಿದ್ದು ನಾಲ್ಕೈದು ಲಿಸ್ಟ್ ಎಂಬ ಮಾತು ಕೇಳಿಬರುತ್ತಿದೆ. ವರ್ಗಾವಣೆ ಆದೇಶದಲ್ಲಿ ದಿನಾಂಕ ತಿದ್ದುಪಡಿಯಿಂದ ಅನುಮಾನ ಹೆಚ್ಚಿದೆ. 

ಇದನ್ನೂ ವೀಕ್ಷಿಸಿ:  ಮೋದಿ ಭಾರತೀಯರ ಸುರಕ್ಷತೆ ಬಗ್ಗೆ ಬದ್ಧತೆ ಹೊಂದಿರುವ ನಾಯಕ: ರಾಜೀವ್ ಚಂದ್ರಶೇಖರ್

Video Top Stories