
Russia-Ukraine: ಉಕ್ರೇನ್ನಿಂದ ವಿಜಯಪುರಕ್ಕೆ ಆಗಮಿಸಿದ ವಿದ್ಯಾರ್ಥಿನಿ: ಪೋಷಕರಲ್ಲಿ ಸಂಭ್ರಮ
* ಉಕ್ರೇನ್ನಿಂದ ಭಾರತೀಯರ ಏರ್ಲಿಫ್ಟ್
* ಉಕ್ರೇನ್ ಪಕ್ಕದ ರಾಷ್ಟ್ರಗಳಿಂದ ಏರ್ಲಿಫ್ಟ್ ಶುರು
* ಭಾರತೀಯರಿಗೆ ಭದ್ರತೆ ನೀಡುವ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ಭರವಸೆ
ವಿಜಯಪುರ(ಫೆ.26): ನಿನ್ನೆಯಷ್ಟೇ ವಿಜಯಪುರದ ಸ್ನೇಹ ಎಂಬ ಯುವತಿ ಉಕ್ರೇನ್ನಿಂದ ಭಾರತಕ್ಕೆ ವಾಪಸ್ ಆಗಿದ್ದಾರೆ. ಇಂದು(ಶನಿವಾರ) ಸ್ನೇಹ ಅವರು ಭಾರತಕ್ಕೆ ಹೇಗೆ ವಾಪಸ್ ಬಂದರು, ಅವರು ಎದುರಿದ ಸಂಕಷ್ಟಗಳ ಬಗ್ಗೆ ವಿವರವಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ. ಈಗಾಗಲೇ ಉಕ್ರೇನ್ನಿಂದ ಭಾರತೀಯರ ಏರ್ಲಿಫ್ಟ್ ಕಾರ್ಯ ಶುರುವಾಗಿದೆ. ಉಕ್ರೇನ್ ಪಕ್ಕದ ರಾಷ್ಟ್ರಗಳಿಂದ ಏರ್ಲಿಫ್ಟ್ ಆರಂಭವಾಗಿದೆ. ರೊಮೇನಿಯಾಗೆ ಎರಡು ವಿಮಾನಗಳನ್ನ ಕಳುಹಿಸಿದೆ ಭಾರತ. ಭಾರತೀಯರಿಗೆ ಭದ್ರತೆ ನೀಡುವ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ಭರವಸೆ ನೀಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
Russia -Ukraine Crisis: ಉಕ್ರೇನ್ ಮೇಲಿನ ದಾಳಿಯ ಹಿಂದಿರೋ ಅಸಲಿ ಕಾರಣ ಏನು.?