Asianet Suvarna News Asianet Suvarna News

ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ; ಹಂಪಿ ಸ್ಮಾರಕಗಳು ಮುಳುಗಡೆ

ಬಳ್ಳಾರಿಯಲ್ಲಿ ತುಂಗಭದ್ರಾ ಜಲಾಶಯದಿಂದ 1 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯದ ಒಳಹರಿವಿನಲ್ಲಿ ಭಾರೀ ಏರಿಕೆಯಾಗಿದ್ದು ಹಂಪಿಯ ಹಲವು ಸ್ಮಾರಕಗಳು ಮುಳುಗಡೆಯಾಗಿವೆ. ಸಾಲು ಮಂಟಪ, ಪುರಂದರದಾಸರ ಮಂಟಪ ಮುಳುಗಡೆಯಾಗಿದೆ.

ಬಳ್ಳಾರಿ (ಸೆ. 21): ಬಳ್ಳಾರಿಯಲ್ಲಿ ತುಂಗಭದ್ರಾ ಜಲಾಶಯದಿಂದ 1 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯದ ಒಳಹರಿವಿನಲ್ಲಿ ಭಾರೀ ಏರಿಕೆಯಾಗಿದ್ದು ಹಂಪಿಯ ಹಲವು ಸ್ಮಾರಕಗಳು ಮುಳುಗಡೆಯಾಗಿವೆ. ಸಾಲು ಮಂಟಪ, ಪುರಂದರದಾಸರ ಮಂಟಪ ಮುಳುಗಡೆಯಾಗಿದೆ.

ಮಳೆಯಲ್ಲಿ ಮುಳುಗಿದ ಉಡುಪಿ; ಸುರಕ್ಷಿತ ಸ್ಥಳಗಳಿಗೆ ನಗರವಾಸಿಗಳು ದೌಡು!

ಈ ಸ್ಮಾರಕಗಳು ಮುಳುಗಡೆಯಾಗುತ್ತಿರುವುದು ಈ ವರ್ಷದಲ್ಲಿ ಎರಡನೇ ಬಾರಿ. ಕಂಪ್ಲಿ ಮತ್ತು ಗಂಗಾವತಿ ಸಂಪರ್ಕಿಸುತ್ತಿರುವ ಸೇತುವೆ ಕೂಡಾ ಮುಳುಗಡೆಯಾಗಿದೆ. ತುಂಗೆ ತುಂಬಿ ಹರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. 

Video Top Stories