Asianet Suvarna News Asianet Suvarna News

ಕೊರೋನಾ ಕಾಟ: ತುಮಕೂರಲ್ಲಿ ಆತಂಕ ಮೂಡಿಸಿದ ವೃದ್ಧನ ಸಾವು

 ತುಮಕೂರು ಜಿಲ್ಲೆಯಲ್ಲಿ ಕೊರೋನಾಗೆ ಎರಡನೇ ಬಲಿ| ಆತಂಕದಲ್ಲಿ ಜಿಲ್ಲೆಯ ಜನತೆ|ಮೂರೇ ದಿನದಲ್ಲಿ ವೃದ್ಧನಲ್ಲಿ ಕೊರೋನಾ ಪಾಸಿಟಿವ್‌ ಆಗಿದ್ದೇಗೆ?| ಟ್ರಾವೆಲ್‌ ಹಿಸ್ಟರಿ ಇಲ್ಲದೇ ಸೋಂಕು ಕಾಣಿಸಿಕೊಂಡಿರುವುದು ಮಾತ್ರ ನಿಗೂಢ|
 

ತುಮಕೂರು(ಏ.30): ಮಹಾಮಾರಿ ಕೊರೋನಾಗೆ ಜಿಲ್ಲೆಯಲ್ಲಿ ಎರಡನೇ ಬಲಿಯಾಗುತ್ತಿದ್ದಂತೆ ಜನರಲ್ಲಿ ಆತಂಕ ಮನೆ ಮಾಡಿದೆ. ನಿನ್ನೆ(ಬುಧವಾರ) ವೃದ್ಧನೊಬ್ಬ ಸಾವನ್ನಪ್ಪಿದ್ದರಿಂದ ಜಿಲ್ಲೆಯ ಜನರು ಭಯಭೀತರಾಗಿದ್ದಾರೆ. ಏಪ್ರಿಲ್‌ 22 ರಂದು ನಡೆಸಿದ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿತ್ತು. ಏ. 25ಕ್ಕೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. 26ರಂದು ವೃದ್ಧ ಸಾವನ್ನಪ್ಪಿದ್ದರು. 

ಮೇ. 4 ಬಳಿಕ ದೇಶದಲ್ಲಿ ಮತ್ತೆ ಲಾಕ್‌ಡೌನ್? ಸುಳಿವು ಕೊಟ್ಟ ಗೃಹ ಸಚಿವಾಲಯ!

ಮೂರೇ ದಿನದಲ್ಲಿ ವೃದ್ಧನಲ್ಲಿ ಕೊರೋನಾ ಪಾಸಿಟಿವ್‌ ಆಗಿದ್ದೇಗೆ ಎಂದ ಚರ್ಚೆಹಗಳು ಆರಂಭವಾಗಿದೆ. ಹೀಗಾಗಿ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ. ಟ್ರಾವೆಲ್‌ ಹಿಸ್ಟರಿ ಇಲ್ಲದೇ ಸೋಂಕು ಕಾಣಿಸಿಕೊಂಡಿರುವುದು ಮಾತ್ರ ನಿಗೂಢವಾಗಿದೆ. 

"