
ಕೊರೋನಾ ಆತಂಕ: ಮುಂಬೈನಿಂದ ಶಿರಸಿಗೆ ಬಂದಿದ್ದ ಚಾಲಕರು ಅರೆಸ್ಟ್
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಚಾಲಕರ ಬಂಧನ| ಕ್ವಾರಂಟೈನ್ಗೆ ಹೆದರಿ ತಪ್ಪಿಸಿಕೊಂಡಿದ್ದ ಚಾಲಕರು| ಮಹಾರಾಷ್ಟ್ರದ ಪುಣೆಯಿಂದ ಉತ್ತರ ಕನ್ನಡ ಜಿಲ್ಲೆಯ ಶಿರಶಿ ಪಟ್ಟಣಕ್ಕೆ ಬಂದಿದ್ದ ಚಾಲಕರು|
ಕಾರವಾರ(ಮೇ.21): ಕ್ವಾರಂಟೈನ್ಗೆ ಹೆದರಿ ತಪ್ಪಿಸಿಕೊಂಡಿದ್ದ ಚಾಲಕರನ್ನ ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಶಿ ಪಟ್ಟಣದಲ್ಲಿ ಇಂದು(ಗುರುವಾರ) ನಡೆದಿದೆ. ಚಾಲಕರು ಮಹಾರಾಷ್ಟ್ರದ ಪುಣೆಯಿಂದ ಉತ್ತರ ಕನ್ನಡ ಜಿಲ್ಲೆಯ ಶಿರಶಿ ಪಟ್ಟಣಕ್ಕೆ ಬಂದಿದ್ದರು ಎಂದು ತಿಳಿದು ಬಂದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ವಲಸೆ ಕಾರ್ಮಿಕರ ದಂಡು: ಕಲಬುರಗಿ ಗಡಿಯಲ್ಲಿ ನೋಂದಣಿಗೆ ಮುಗಿಬಿದ್ದ ಜನರು
ಶಿರಸಿಯ ದೀವಗಿ ವಾರ್ನರ್ ಫ್ಯಾಕ್ಟರಿಗೆ ಸೇರಿದ ಚಾಲಕರು ಕ್ವಾರಂಟೈನ್ಗೆ ಹೆದರಿ ತಪ್ಪಿಸಿಕೊಂಡಿದ್ದರು. ಶಿರಸಿಯ ಕ್ವಾರಂಟೈನ್ ಕೇಂದ್ರದಲ್ಲಿದ್ದ 9 ಮಂದಿಗೆ ಕೊರೋನಾ ಸೋಂಕುನ ತಗುಲಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.