ಇಡಿ ಬಲೆಗೆ ಬಿದ್ದಿರುವ ನಾಗೇಂದ್ರಗೆ ಮತ್ತಷ್ಟು ಸಂಕಷ್ಟ..! ಡೀಲ್‌ನಲ್ಲಿ ಕೈಜೋಡಿಸಿದ್ದವರೇ ಮಾಜಿ ಸಚಿವನಿಗೆ ಮುಳುವಾದ್ರಾ..?

ಸತ್ಯಾನಾರಾಯಣ ವರ್ಮಾ ಕುಟುಂಬಕ್ಕೆ ಜೀವ ಬೆದರಿಕೆ ಇದೆಯಂತೆ
ಜಡ್ಜ್ ಮುಂದೆ ಹೇಳಲು ಮನವಿ ಮಾಡಿದ್ದ ಸತ್ಯನಾರಾಯಣ ವರ್ಮಾ
ಹಣ ವರ್ಗಾವಣೆ ಹಗರಣ ನಾಗೇಂದ್ರ ಮತ್ತಷ್ಟು ಉರುಳಾಗುವ ಸಾಧ್ಯತೆ

Share this Video
  • FB
  • Linkdin
  • Whatsapp

ಇಡಿ ಬಲೆಗೆ ಬಿದ್ದಿರುವ ನಾಗೇಂದ್ರಗೆ(Nagendra) ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಹೇಳಿಕೆ ನೀಡಲು ಮತ್ತೊಬ್ಬ ಆರೋಪಿ ಕಾಯ್ತಿದ್ದಾನಂತೆ. ಇಡಿ ಮುಂದೆ ಸತ್ಯ ಬಾಯ್ಬಿಡಲು ಸತ್ಯನಾರಾಯಣ ವರ್ಮಾ(Satyanarayan Verma) ಸಿದ್ಧವಾಗಿದ್ದಾನಂತೆ. ಹಾಗಾಗಿ ಯಾರ ಕೊರಳಿಗೆ ಉರುಳಾಗ್ತಾನೋ ಸತ್ಯನಾರಾಯಣ ವರ್ಮಾ ಎಂಬುದು ತಿಳಿದಿಲ್ಲ. ಎಸ್ಐಟಿ (SIT) ಅಧಿಕಾರಿಗಳ ವಶದಲ್ಲಿ ಸತ್ಯನಾರಾಯಣ ವರ್ಮಾ ಇದ್ದು, ಇಡೀ ಹಗರಣಕ್ಕೆ ಸೂತ್ರಧಾರ ನಾಗೇಂದ್ರ ಎಂದು ವರ್ಮಾ ಬಾಯ್ಬಿಟ್ಟಿದ್ದಾರಂತೆ. ಯಾವಾಗ ನನ್ನನ್ನ ವಶಕ್ಕೆ ಪಡೆಯುತ್ತಾರೆ ಎಂದು ಸತ್ಯನಾರಾಯಣ ವರ್ಮಾ ಕೇಳುತ್ತಿದ್ದಾನಂತೆ. ಈಗಾಗಲೇ ಕೋರ್ಟ್‌ನಲ್ಲಿ ನಾಗೇಂದ್ರ ವಿರುದ್ದ ಗಂಭೀರ ಆರೋಪವನ್ನು ಸತ್ಯನಾರಾಯಣ ವರ್ಮಾ ಮಾಡಿದ್ದು, ನಾಗೇಂದ್ರರಿಂದ ಸತ್ಯನಾರಾಯಣ ವರ್ಮಾಣಗೆ ಬೆದರಿಕೆಯಿದೆಯಂತೆ. ಇಡಿ ಎಂಟ್ರಿ ಹಿನ್ನಲೆ ಅಧಿಕಾರಿಗಳ ಮುಂದೆ ಸತ್ಯ ಹೇಳಲು ಕಾಯುತ್ತಿರುವ ವರ್ಮಾ , ಸತ್ಯನಾರಾಯಣ ವರ್ಮಾ ಇಡಿ ವಶಕ್ಕೆ ಹೋದ್ರೆ ನಾಗೇಂದ್ರಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ನಾಗೇಂದ್ರ ಬಳಿಕ ಇಡಿ ಮುಂದಿನ ಬೇಟೆ ದದ್ದಲ್: ಬಂಧನ ಭೀತಿಯಿಂದ ಅಜ್ಞಾತವಾಗಿರುವ ಶಾಸಕ !

Related Video