Asianet Suvarna News Asianet Suvarna News

ಸ್ಯಾಂಟ್ರೋ ರವಿ ಬಂಧನ: ನಿರ್ದಾಕ್ಷಿಣ್ಯ ಕ್ರಮ ಎಂದ ಆರಗ ಜ್ಞಾನೇಂದ್ರ

ಸ್ಯಾಂಟ್ರೋ ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಪಾರದರ್ಶಕ ತನಿಖೆ ನಡೆಸುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಸ್ಯಾಂಟ್ರೋ ರವಿ ವಿಚಾರದಲ್ಲಿ ಸರ್ಕಾರದ ಮೇಲೆ ವಿಪಕ್ಷಗಳ ಆರೋಪ ಮಾಡುತ್ತಿದ್ದು, ಸ್ಯಾಂಟ್ರೋ ರವಿ ಬಂಧನದ ನಂತರ ಸಚಿವ ಆರಗ ಜ್ಞಾನೇಂದ್ರ ಖಡಕ್‌ ತಿರುಗೇಟು ನೀಡಿದ್ದಾರೆ. ಆರೋಪಿಯ ಎಲ್ಲಾ ತಪ್ಪಿಗೂ ಕಠಿಣ ಶಿಕ್ಷೆ ಸಿಗಲಿದೆ. ಯಾವುದೇ ಒತ್ತಡವಿಲ್ಲದೆ  ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಯಾವ ರಾಜಕಾರಣಿ, ಅಧಿಕಾರಿ ಇದ್ರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಸ್ಯಾಂಟ್ರೋ ರವಿ ಎಲ್ಲೇ ಇದ್ದರು ವಿಚಾರಣೆಗೆ ಒಳಪಡಿಸಬೇಕು, ಕರೆದುಕೊಂಡು ಬರಬೇಕು ಎಂದು ಹೇಳಿದ್ದೀವಿ. ಅವನ ಕೃತ್ಯಕ್ಕೆ ಸರಿಯಾದಂತ ಶಿಕ್ಷೆ ಆಗಬೇಕು ಎಂದು ಹೇಳಿದರು.

ಸ್ಯಾಂಟ್ರೋ ರವಿಯನ್ನು ಸೇಫ್ ಮಾಡಲು ಸಚಿವ ಆಗರ ಜ್ಞಾನೇಂದ್ರ ಯತ್ನಿಸಿದ್ರ ...