
ಬೆಳಗಾವಿ: ರಾಯಣ್ಣ ಮೂರ್ತಿ ತೆರವುಗೊಳಿಸುವಂತೆ MES ಪಟ್ಟು
ವಿವಾದ ಇತ್ಯರ್ಥವಾಗುವವರೆಗೆ ಸಂಗೊಳ್ಳಿ ರಾಯಣ್ಣ ಮೂರ್ತಿ ತೆರವುಗೊಳಿಸುವಂತೆ ಪಟ್ಟು ಹಿಡಿದ ಎಂಇಎಸ್| ಎಂಇಎಸ್ಗೆ ಸಾಥ್ ಕೊಟ್ಟ ಶಿವಸೇನೆ| ಯಾವುದೇ ಇತ್ಯರ್ಥಕ್ಕೆ ಬರದೆ ಸಭೆ ಮೊಟಕು|
ಬೆಳಗಾವಿ(ಆ.28): ವಿವಾದ ಇತ್ಯರ್ಥವಾಗುವವರೆಗೆ ಸಂಗೊಳ್ಳಿ ರಾಯಣ್ಣ ಮೂರ್ತಿ ತೆರವುಗೊಳಿಸುವಂತೆ ಪಟ್ಟು ಹಿಡಿಯುವ ಮೂಲಕ ಎಂಇಎಸ್ ಉದ್ಧಟತನ ಮೆರೆದ ಘಟನೆ ಇಂದು(ಶುಕ್ರವಾರ) ಜಿಲ್ಲಾಧಿಕಾರಿ ಸಭೆಯಲ್ಲಿ ನಡೆದಿದೆ. ಎಂಇಎಸ್ಗೆ ಶಿವಸೇನೆ ಮುಖಂಡರೂ ಕೂಡ ಸಾಥ್ ಕೊಟ್ಟಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ರಾಯಣ್ಣ ಪ್ರತಿಮೆ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಸೂಚನೆ: ಬೊಮ್ಮಾಯಿ
ಶಿವಸೇನೆ ಮುಖಂಡರು ಸಭೆಯಿಂದ ಅರ್ಧಕ್ಕೆ ಹೊರ ನಡೆದಿದ್ದಾರೆ. ಯಾವುದೇ ಇತ್ಯರ್ಥಕ್ಕೆ ಬರದೆ ಸಭೆ ಮೊಟಕುಗೊಳಿಸಲಾಗಿದೆ. ಹೀಗಾಗಿ ಈ ವಿವಾದ ಸದ್ಯಕ್ಕೆ ಬಗೆಹರಿಯುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.