Asianet Suvarna News Asianet Suvarna News

ಬೆಂಗ್ಳೂರಲ್ಲಿ ಕಂಟ್ರೋಲ್‌ ತಪ್ಪಿದ ಕೊರೋನಾ: ಈ ದೃಶ್ಯ ನೋಡಿದ್ರೆ ನಿಮ್ಮ ಎದೆ ನಡುಗುತ್ತೆ..!

ಅಂತ್ಯಸಂಸ್ಕಾರಕ್ಕೂ ಕ್ಯೂನಲ್ಲಿ ನಿಲ್ಲುವಂತ ಪರಿಸ್ಥಿತಿ| ಮೃತದೇಹ ಸುಡಲು ಕೂಡ ಜನರು ಪರದಾಟ| ಸುಮನಹಳ್ಳಿ ಚಿತಾಗಾರದ ಎದುರು ಸಾಲಾಗಿ ನಿಂತ ಆಂಬುಲೆನ್ಸ್‌ಗಳು| ಒಂದೇ ದಿನ ಬೆಂಗಳೂರಿನಲ್ಲಿ 55 ಮಂದಿ ಸಾವು| 

ಬೆಂಗಳೂರು(ಏ.14): ಮಾಹಾನಗರದ ಗಲ್ಲಿ ಗಲ್ಲಿಗೂ ಮಹಾಮಾರಿ ಕೊರೋನಾ ಕಾಲಿಟ್ಟಿದೆ. ಹೌದು, ವೈರಸ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೂ ಕ್ಯೂನಲ್ಲಿ ನಿಲ್ಲುವಂತ ಪರಿಸ್ಥಿತಿ ಬಂದಿದೆ. ಸುಮನಹಳ್ಳಿಯ ಚಿತಾಗಾರದ ಎದುರು ಆಂಬುಲೆನ್ಸ್‌ಗಳು ಪಾಳಿಯಲ್ಲಿ ನಿಂತಿವೆ. ಮೃತದೇಹಗಳನ್ನ ಸುಡಲು ಕೂಡ ಜನರು ಪರದಾಟ ನಡೆಸುತ್ತಿದ್ದಾರೆ. ಕೋವಿಡ್‌ ಸೋಂಕಿಗೆ ನಿನ್ನೆ(ಮಂಗಳವಾರ) ಒಂದೇ ದಿನ ಬೆಂಗಳೂರಿನಲ್ಲಿ ಬರೋಬ್ಬರಿ 55 ಮಂದಿ ಸಾವನ್ನಪ್ಪಿದ್ದಾರೆ.

ವೆಂಟಿಲೇಟರ್ ಕೊರತೆ, ಬೆಡ್ ಸಿಗ್ತಿಲ್ಲ, ಸ್ಮಶಾನದಲ್ಲಿ ಕ್ಯೂ; ಎಲ್ಲಿಗೆ ಬಂತು ಕೊರೊನಾ ಆರ್ಭಟ

Video Top Stories