Asianet Suvarna News Asianet Suvarna News

ಚಿತ್ರದುರ್ಗ: ತಬ್ಲಿಘಿಗಳ ಜೊತೆ ನಂಟು, ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿ ಸಾವು

ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿ ಸಾವು| ಕಳೆದ 8 ದಿನಗಳಿಂದ ಚಿತ್ರದುರ್ಗದ ಕ್ವಾರಂಟೈನ್‌ ಕೇಂದ್ರದಲ್ಲಿದ್ದ ಮೃತ ವ್ಯಕ್ತಿ| ಎದೆನೋವಿನಿಂದ ಮೃತಪಟ್ಟ ವ್ಯಕ್ತಿ|  ತಬ್ಲಿಘಿಗಳ ಜೊತೆ ಸಂಪರ್ಕದಲ್ಲಿದ್ದ ಮೃತ ವ್ಯಕ್ತಿ|

ಚಿತ್ರದುರ್ಗ(ಮೇ.17): ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಗರದಲ್ಲಿ ಇಂದು(ಭಾನುವಾರ) ನಡೆದಿದೆ. ಕಳೆದ 8 ದಿನಗಳಿಂದ ಕ್ವಾರಂಟೈನ್‌ನಲ್ಲಿದ್ದ 55 ವರ್ಷದ ವ್ಯಕ್ತಿ ಎಂದು ತಿಳಿದು ಬಂದಿದೆ. 

ನಾಳೆಯಿಂದ ಬೀಳಲಿದೆ 4 ನೇ ಲಾಕ್‌ಡೌನ್ ಬೀಗ; ಯಾವುದಕ್ಕೆ ಸಿಗಲಿದೆ ರಿಲೀಫ್?

ಮೃತ ವ್ಯಕ್ತಿ ತಬ್ಲಿಘಿಗಳ ಜೊತೆ ಸಂಪರ್ಕದಲ್ಲಿದ್ದ ಎಂದು ತಿಳಿದು ಬಂದಿದೆ. ತಬ್ಲಿಘಿಗಳಿಗೆ ಆಹಾರ ತಂದು ನೀಡಿದ್ದಕ್ಕೆ ಮೃತ ವ್ಯಕ್ತಿಯನ್ನ ನಗರದಲ್ಲಿ ಕ್ವಾರಂಟೈನ್‌ನಲ್ಲಿಡಲಾಗಿತ್ತು. ಮೃತ ವ್ಯಕ್ತಿಗೆ ಕೊರೋನಾ ಸೋಂಕು ಇತ್ತಾ? ಇಲ್ವಾ? ಎಂಬುದರ ಬಗ್ಗೆ ಪರೀಕ್ಷೆಯಿಂದ ತಿಳಿದು ಬರಬೇಕಿದೆ.