Asianet Suvarna News Asianet Suvarna News

ಕೊರೋನಾ ಆತಂಕದ ಮಧ್ಯೆಯೇ ರಾಜ್ಯದಲ್ಲಿ ಲಾಕ್‌ಡೌನ್‌ ಸಡಿಲ

ಲಾಕ್‌ಡೌನ್‌ ಇಂದಿನಿಂದ ಸ್ವಲ್ಪ ಸಡಿಲ| ಕಂಟೈನ್‌ಮಂಟ್‌ ಝೋನ್‌ ಬಿಟ್ಟು ಉಳಿದ ಭಾಗಗಳಲ್ಲಿ ಸ್ವಲ್ಪ ಮಟ್ಟಿಗೆ ವಿನಾಯ್ತಿ|ಕೆಲ ಕ್ಷೇತ್ರಗಳಿಗೆ ಮಾತ್ರ ಸಡಿಲಿಕೆ, ಷರತ್ತು ಅನ್ವಯ|

ಬೆಂಗಳೂರು(ಏ.23): ಕೊರೋನಾ ಸೋಂಕು ಹರಡದಂತೆ ಕಳೆದೊಂದು ತಿಂಗಳಿಂದ ವಿಧಿಸಲಾಗಿದ್ದ ಲಾಕ್‌ಡೌನ್‌ ಇಂದಿನಿಂದ(ಗುರುವಾರ) ಸ್ವಲ್ಪ ಸಡಿಲವಾಗಿದೆ. ಕಂಟೈನ್‌ಮಂಟ್‌ ಝೋನ್‌ ಬಿಟ್ಟು ಉಳಿದ ಭಾಗಗಳಲ್ಲಿ ಸ್ವಲ್ಪ ಮಟ್ಟಿಗೆ ವಿನಾಯ್ತಿ ನೀಡಲಾಗಿದೆ. ಕೆಲ ಕ್ಷೇತ್ರಗಳಿಗೆ ಮಾತ್ರ ಸಡಿಲಿಕೆಯಾಗಿದೆ. ಆದರೆ ಷರತ್ತುಗಳು ಅನ್ವಯವಾಗುತ್ತವೆ. 

ಲಾಕ್‌ಡೌನ್ ಸಡಿಲಿಕೆ ಎಂದು ರೋಡ್‌ಗಿಳಿದ್ರೆ ಜೋಕೆ! ಈ ಶರತ್ತು ಪಾಲಿಸಿದ್ರೆ ಮಾತ್ರ ಓಕೆ

ಹಾಟ್‌ಸ್ಪಾಟ್‌ಗಳಲ್ಲಿ ಯಾವುದೇ ರೀತಿಯ ವಿನಾಯ್ತಿ ನೀಡಿಲ್ಲ ರಾಜ್ಯ ಸರ್ಕಾರ. ಮೊದಲಿದ್ದ ಹಾಗೆಯೇ ಲಾಕ್‌ಡೌನ್‌ ಮುಂದುವರೆಯಲಿದೆ. ಹೀಗಾಗಿ ಕಂಟೈನ್‌ಮಂಟ್‌ ಪ್ರದೇಶದ ಜನರು ಮಾತ್ರ ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದಾರೆ.