Mandya: ಹೊಸ ವರ್ಷ ಸಂಭ್ರಮಾಚರಣೆ: ಕಾವೇರಿ ತೀರದಲ್ಲಿ ಮೋಜು ಮಸ್ತಿಗೆ ಖಾಕಿ ಬ್ರೇಕ್
ಹೊಸ ವರ್ಷಾಚರಣೆ ಹಿನ್ನೆಲೆ ಮಂಡ್ಯ ಜಿಲ್ಲೆಯಲ್ಲಿ ಖಾಕಿ ಹೈ ಅಲರ್ಟ್ ಆಗಿದ್ದು, ಕಾವೇರಿ ತೀರದಲ್ಲಿ ಪ್ರವಾಸಿಗರ ಮೋಜು ಮಸ್ತಿ ಬಂದ್ ಮಾಡಲಾಗಿದೆ.
ಮಂಡ್ಯ; ಹೊಸ ವರ್ಷಾಚರಣೆಗೆ ಮಂಡ್ಯ ಜಿಲ್ಲೆಯ ಶ್ರಿರಂಗಪಟ್ಟಣ ವ್ಯಾಪ್ತಿಯಲ್ಲಿ ನಿಷೇಧ ಹೇರಲಾಗಿದ್ದು ಇಂದು ಬೆಳಗ್ಗೆ 6ರಿಂದ ಜನವರಿ 2ರವರೆಗೆ ನೋ ಎಂಟ್ರಿ. ಬಲಮುರಿ ಎಡಮುರಿ KRS ಹಿನ್ನೀರಿಗೆ ಪ್ರವೇಶ ನಿಷಿದ್ಧ ಮಾಡಲಾಗಿದ್ದು, ಪ್ರವಾಸಿಗರ ಜೀವಕ್ಕೆ ಕುತ್ತು ಹಿನ್ನೆಲೆ ಪ್ರವೇಶ ನಿರ್ಬಂಧ ಮಾಡಿದ್ದಾರೆ.