Asianet Suvarna News Asianet Suvarna News

ದತ್ತಪೀಠದ ರಸ್ತೆಯಲ್ಲಿ ಮೊಳೆ ಎಸೆದ ಪ್ರಕರಣ: ಕೃತ್ಯದ ಹಿಂದೆ ಪಿಎಫ್‌ಐ ಕೈವಾಡ

ದತ್ತಜಯಂತಿ ವೇಳೆ ಚಂದ್ರದ್ರೋಣ ಪರ್ವತದಲ್ಲಿ ಮೊಳೆ ಎಸೆದಿರುವುದರ ಹಿಂದೆ ಪಿಎಫ್‌ಐ ಕೈವಾಡವಿದೆ. ಬಂಧಿತ ಇಬ್ಬರು ಆರೋಪಿಗಳಾದ ಮಹಮದ್ ಶಹಬಾಸ್‌, ವಾಹೀದ್‌ ಹುಸೆನ್‌ ಇಬ್ಬರು ಸ್ಫೋಟಕ ಸತ್ಯ ಹೇಳಿದ್ದಾರೆ.
 

ಕಾಫಿನಾಡಿನಲ್ಲಿ ಕೋಮು ಗಲಭೆ ಸೃಷ್ಟಿಸಲು ಮಹಾ ಪ್ಲಾನ್‌ ನಡೆದಿತ್ತು ಎಂಬ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ. ದತ್ತ ಜಯಂತಿ ನೋಡಿ ಸಹಿಸಲು ಆಗದೇ ಚಂದ್ರದ್ರೋಣ ಪರ್ವತದಲ್ಲಿ ಡಿ. 6ರಂದು ಮೊಳೆ ಎಸೆಯಲಾಗಿತ್ತು ಎಂಬ ಸತ್ಯ ಬಯಲಾಗಿದೆ. ಪೊಲೀಸ್‌ ವಿಚಾರಣೆ ಆರೋಪಿಗಳು ಸತ್ಯ ಹೇಳಿದ್ದು, ಮೆರವಣಿಗೆ ವೇಳೆ ಮುಸ್ಲಿಂ ಸಮುದಾಯಕ್ಕೆ  ಗೇಲಿ ಮಾಡಿದ್ದಕ್ಕೆ ಈ ಕೃತ್ಯ ಎಸಗಲಾಗಿದೆ ಎಂದು ತಿಳಿಸಿದ್ದಾರೆ.