Asianet Suvarna News Asianet Suvarna News

ದೇವಾಲಯ ಧ್ವಂಸ ಹಿಂದಿನ ಕಾರಣ ಹೇಳಿದ ವಕೀಲ ವೇಣುಗೋಪಾಲ್

* ದೇವಾಲಯ ಧ್ವಂಸ ಪ್ರಕರಣ
* ಸುಪ್ರೀಂ ಆದೇಶದ ಬದಲು ಮುಖ್ಯ ಕಾರ್ಯದರ್ಶಿ ಆದೇಶ ಪಾಲನೆ
* ಹಿರಿಯ ವಕೀಲ ವೇಣುಗೋಪಾಲ್  ಹೇಳಿಕೆ
* ಟಾರ್ಗೆಟ್ ರೀಚ್ ಮಾಡಲು ಅಧಿಕಾರಿಗಳು ಇಂಥ  ಕೆಲಸ ಮಾಡುತ್ತಿದ್ದಾರೆ

ಬೆಂಗಳೂರು/ಮೈಸೂರು(ಸೆ. 14)  ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವೇ ಒಂದು..ರಾಜ್ಯದ ಮುಖ್ಯ ಕಾರ್ಯದರ್ಶಿ ನೀಡಿದ ಆದೇಶವೇ ಒಂದು. ಸಿಎಸ್ ರವಿಕುಮಾರ್  ಹಾಗಾದರೆ ತಪ್ಪು ಮಾಡಿದ್ರಾ? ದೇವಾಲಯ ಧ್ವಂಸ ಪ್ರಕರಣ ಹಲವು ತಿರುವು ಪಡೆದುಕೊಂಡಿದೆ.

ಸುಪ್ರೀಂ ಆದೇಶದ ಅಂಶಗಳನ್ನು ಮರೆತರಾ ಮುಖ್ಯ ಕಾರ್ಯದರ್ಶಿ? ಎಡವಟ್ಟಿಗೆ ಇದೆ ಕಾರಣ!

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ವಕೀಲ ವೇಣುಗೋಪಾಲ್ ಇಲ್ಲಿ ಸುಪ್ರೀಂ ಆದೇಶಕ್ಕಿಂತ ಮುಖ್ಯ ಕಾರ್ಯದರ್ಶಿ ಆದೇಶವೇ ಮುಖ್ಯವಾದಂತೆ ಕಾಣುತ್ತಿದೆ. ಟಾರ್ಗೆಟ್ ರೀಚ್ ಮಾಡುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದು ಸರಿಯಾದ ಅಂಕಿ-ಅಂಶ ಅವರ ಬಳಿಯೇ ಇಲ್ಲ ಎಂದು ವಕೀಲರು ಹೇಳಿದ್ದಾರೆ.  ದೇಗುಲಗಳ ಧ್ವಂಸ ಪ್ರಕರಣ ಜನಾಕ್ರೋಶಕ್ಕೆ ಕಾರಣವಾಗಿದೆ. 

Video Top Stories