Asianet Suvarna News Asianet Suvarna News

ಕೊರೋನಾಗೆ ತತ್ತರಿಸಿದ ಮೀನುಗಾರರು, ವಿಶೇಷ ಪ್ಯಾಕೇಜ್ ಕೇಳಿದ ಶಾಸಕ

ಕರಾವಳಿ ಭಾಗದಲ್ಲಿ ಸುಮಾರು 35 ಸಾವಿರ ಮೀನುಗಾರರು ಕೊರೋನಾ ಹೊಡೆತದಿಂದ ತತ್ತರಿಸಿದ್ದಾರೆ. ಹೀಗಾಗಿ ಅವರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಕುಮಟಾ ಶಾಸಕ ದಿನಕರ್ ಶೆಟ್ಟಿ ಮನವಿ ಮಾಡಿದ್ದಾರೆ.

ಉತ್ತರ ಕನ್ನಡ(ಮೇ.07): ಕರಾವಳಿ ಭಾಗದಲ್ಲಿ ಸುಮಾರು 35 ಸಾವಿರ ಮೀನುಗಾರರು ಕೊರೋನಾ ಹೊಡೆತದಿಂದ ತತ್ತರಿಸಿದ್ದಾರೆ. ಹೀಗಾಗಿ ಅವರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಕುಮಟಾ ಶಾಸಕ ದಿನಕರ್ ಶೆಟ್ಟಿ ಮನವಿ ಮಾಡಿದ್ದಾರೆ.

ಎಲ್ಲ ದಿನವೂ ಮದ್ಯ ಮಾರಾಟ: ದರ ಹೆಚ್ಚಿಸಿದ್ರೆ ಕೇಸ್

ಕಳೆದ ವರ್ಷ ಅತೀ ಮಳೆ, ನೆರೆಯಿಂದ ಮೀನುಗಾರರಿಗೆ ಸಮಸ್ಯೆ ಆಗಿತ್ತು. ಮಾಚ್‌, ಎಪ್ರಿಲ್, ಮೇ ತಿಂಗಳು ಮೀನುಗಾರರಿಗೆ ಲಾಭದ ಸಮಯ. ಆದರೆ ಮೀನಿನ ಕ್ಷಾಮ ಹಾಗೂ ಕೊರೋನಾದಿಂದ ಮೀನುಗಾಗರರು ತತ್ತರಿಸಿದ್ದಾರೆ. ಹಾಗಾಗಿ ಅವರಿಗೆ ಬೇಕಾದ ಅಗತ್ಯ ಪ್ಯಾಕೇಜ್ ಘೋಷಿಸಬೇಕೆಂದು ಸಿಎಂಗೆ ಮನವಿ ಮಾಡಿದ್ದಾರೆ.

Video Top Stories