
ವಿಶ್ವಾದ್ಯಂತ ವೈರಸ್ ಅಟ್ಟಹಾಸ: ಮಹಾಮಾರಿ ಕೊರೋನಾಗೆ ಸಿಕ್ಕೇ ಬಿಡ್ತಾ ಔಷಧ..?
ಕೊರೋನಾಗೆ ಆಯುರ್ವೇದದಲ್ಲಿ ಔಷಧಿ| ಸಚಿವ ಡಾ. ಸುಧಾಕರ್ಗೆ ಪತ್ರ ಬರೆದ ಡಾ. ಗಿರಿಧರ ಕಜೈ|ಆಯುರ್ವೇದ, ಅಲೋಪತಿ, ಹೋಮಿಯೋಪತಿ ಎಂಬುದು ಮುಖ್ಯ ಅಲ್ಲ| ಅಂತಿಮವಾಗಿ ಕೊರೋನಾಗೆ ಔಷಧಿ ಕಂಡು ಹಿಡಿಯುವುದೇ ಮುಖ್ಯ|
ಬೆಂಗಳೂರು(ಏ.10): ಮಹಾಮಾರಿ ಕೊರೋನಾಗೆ ಆಯುರ್ವೇದದಲ್ಲಿ ಔಷಧಿಯನ್ನ ಕಂಡು ಹಿಡಿದಿದ್ದೇನೆ ಎಂದು ಡಾ. ಗಿರಿಧರ ಕಜೈ ಎಂಬುವವರು ನನಗೆ ಪತ್ರ ಬರೆದಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿದ್ದಾರೆ. ಈ ಸಂಬಂಧ ಡಾ. ಗಿರಿಧರ ಕಜೈ ನನ್ನನ್ನು ಭೇಟಿ ಕೂಡ ಮಾಡಿದ್ದಾರೆ.
Add Asianetnews Kannada as a Preferred Source

ಹೂ ಮೇಲೆ ದೊಡ್ಡಣ್ಣ ಕೆಂಗಣ್ಣು! ಹತಾಶ ಟ್ರಂಪ್ ಮುಂದಿನ ಪ್ಲಾನ್ ಏನು?
ಆಯುರ್ವೇದ, ಅಲೋಪತಿ, ಹೋಮಿಯೋಪತಿ ಎಂಬುದು ಮುಖ್ಯ ಅಲ್ಲ. ಅಂತಿಮವಾಗಿ ಕೊರೋನಾಗೆ ಔಷಧಿ ಕಂಡು ಹಿಡಿಯುವುದೇ ಮುಖ್ಯವಾಗಿದೆ. ನಮಗೆ ಐಸಿಎಂಆರ್ ನಿಂದ ಪರವಾನಗಿ ಸಿಗಬೇಕು. ನಾನು ನಿನ್ನೆಯೇ ಪತ್ರ ಬರೆಯಲು ಸೂಚನೆ ನೀಡಿದ್ದೇನೆ. ಅವರು ಪರವಾನಗಿ ಕೊಟ್ಟರೆ ಇದೊಂದು ಮೈಲಿಗಲ್ಲಾಗುತ್ತದೆ ಎಂದು ಹೇಳಿದ್ದಾರೆ. <br/>"