ಮಕ್ಕಳಿಗಾಗಿ ಜೋಳಿಗೆ ಹಾಕಿದ ಸ್ವಾಮೀಜಿ: ಗೋವುಗಳ ರಕ್ಷಣೆಗೆ ಪಣ ತೊಟ್ಟ ನಾಸೀರ್

ಕಲಬುರಗಿಯ ಶ್ರೀ ಶಿವಾನಂದ ಸ್ವಾಮೀಜಿ  ಮತ್ತು ಚಿಕ್ಕಮಗಳೂರಿನ ಮಹಮದ್ ನಾಸೀರ್ ಸಮಾಜ ಸೇವೆಯಲ್ಲಿ ತೊಡಗಿದ್ದು, ಇತರರಿಗೆ ಮಾದರಿಯಾಗಿದ್ದಾರೆ.
 

Share this Video
  • FB
  • Linkdin
  • Whatsapp

ಕಲಬುರಗಿಯ ಜೇವರ್ಗಿಯ ಸೊನ್ನ ವಿರಕ್ತ ಮಠದ ಪೀಠಾಧಿಪತಿ ಮಕ್ಕಳಿಗಾಗಿ ಜೋಳಿಗೆ ಹಾಕಿದ್ದು, ಮನೆ ಮನೆಗೂ ಹೋಗುತ್ತಾರೆ. ಅದು ತಮ್ಮ ಮಠಕ್ಕಾಗಿ ಅಲ್ಲ, ಬಡ ಮಕ್ಕಳಿಗಾಗಿ. ಈ ಮೂಲಕ ಸರ್ಕಾರ ಮಾಡುವ ಕೆಲಸವನ್ನು ಸ್ವಾಮೀಜಿ ಮಾಡಿದ್ದಾರೆ.ತಮ್ಮ ಮಠದಿಂದ ಶಾಲೆಗೆ 1 ಲಕ್ಷ ರೂ. ದೇಣಿಗೆ ನೀಡಿ, 5 ಎಕರೆ ಜಮೀನಿನಲ್ಲಿ ಶಾಲೆಗೆ 2 ಎಕರೆ ದಾನ ಮಾಡಿದ್ದಾರೆ. ಇನ್ನು ಚಿಕ್ಕಮಗಳೂರು ನಗರ ನಿವಾಸಿ ಮಹ್ಮದ್​ ನಾಸೀರ್ ಗೋವುಗಳ ರಕ್ಷಣೆಗೆ ಪಣ ತೊಟ್ಟಿದ್ದಾರೆ. ಪಂಚಮುಖಿ ಆಂಜನೇಯ ದೇಗುಲಕ್ಕೆ 4 ಎಕರೆ ದಾನ ಮಾಡಿದ್ದಾರೆ. ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ರಸ್ತೆ ಪಕ್ಕದ ಬೆಲೆ ಬಾಳುವ ಜಾಗವನ್ನು ದಾನ ಮಾಡಿದ್ದಾರೆ. 5 ಕೋಟಿಗೂ ಅಧಿಕ ಬೆಲೆಯ ಭೂಮಿಯನ್ನು ಚಿಕ್ಕಮಗಳೂರಿನ ಸ್ವಾಮಿ ಸಮರ್ಥ ರಾಮದಾಸ ಟ್ರಸ್ಟ್​ಗೆ ದಾನ ಮಾಡಿದ್ದಾರೆ.

ಕನ್ನಡ ಪ್ರಭ ವರದಿಯಿಂದ ಎಂಬಿಬಿಎಸ್‌ ವಿದ್ಯಾರ್ಥಿಗೆ ನೆರವಿನ ಮಹಾಪೂರ

Related Video