
ಸಿಸಿಟಿವಿಯಲ್ಲಿ ಆತ್ಮದ ದೃಶ್ಯ; ತೋಟದ ಬಳಿ ಹೋಗಲು ಭಯಪಡ್ತಿದ್ದಾರೆ ಜನ
ಶ್ರೀರಂಗಪಟ್ಟಣ ತಾಲೂಕಿನ ನಗುವನಹಳ್ಳಿ ಗ್ರಾಮದಲ್ಲಿ ಸಿಸಿಟಿವಿಯಲ್ಲಿ ಆತ್ಮ ಸಂಚಾರದ ದೃಶ್ಯ ನೋಡಿ ಊರ ಜನ ಬೆಚ್ಚಿ ಬಿದ್ದಿದ್ದಾರೆ.
ಮಂಡ್ಯ (ಫೆ. 23): ಶ್ರೀರಂಗಪಟ್ಟಣ ತಾಲೂಕಿನ ನಗುವನಹಳ್ಳಿ ಗ್ರಾಮದಲ್ಲಿ ಸಿಸಿಟಿವಿಯಲ್ಲಿ ಆತ್ಮ ಸಂಚಾರದ ದೃಶ್ಯ ನೋಡಿ ಊರ ಜನ ಬೆಚ್ಚಿ ಬಿದ್ದಿದ್ದಾರೆ. ನಗುವನಹಳ್ಳಿ ಗ್ರಾಮದ ಗೋಪಾಲ್ ಎಂಬುವರ ತೋಟದ ಬಳಿ
ಕಳೆದ ಎರಡು ಮೂರು ತಿಂಗಳಿನಿಂದ ಮೂರ್ನಾಲ್ಕು ಜನರ ಸಾವನ್ನಪ್ಪಿದ್ದಾರೆ. ಸಾವಿಗೀಡಾದವರಲ್ಲಿ ಒಂದಿಬ್ಬರು ದೆವ್ವವಾಗಿರೋ ಬಗ್ಗೆ ಗ್ರಾಮದಲ್ಲಿ ವದಂತಿಯಿದೆ.
ಸಿಸಿಟಿವಿ ದೃಶ್ಯ ನೋಡಿ ಹಗಲಿನಲ್ಲಿ ಅಲ್ಲಿ ಸಂಚರಿಸಲು ಜನ ಭಯಪಡುತ್ತಿದ್ದಾರೆ. ರಾತ್ರಿ ವೇಳೆಯಂತೂ ಹೇಗೂ ಹೋಗಲ್ಲ ಬಿಡಿ..!