
ಮಸೀದಿಗಳಿಗೆ ಬೆದರಿಕೆ ಪತ್ರ ಬರೆದ್ರಾ ಬಿಜೆಪಿ ಶಾಸಕರು?
ರಾಯಚೂರು ನಗರದ ಮಸೀದಿಗಳಿಗೆ ಬಂದ ಬೆದರಿಕೆ ಪತ್ರಗಳು| ಶಾಸಕ ಸೋಮಶೇಖರ್ ರೆಡ್ಡಿ ಹೆಸರಿನಲ್ಲಿ ಬಂದ ಬೆದರಿಕೆ ಪತ್ರಗಳು| ಲೇಟರ್ನಲ್ಲಿ ಶಾಸಕ ಆನಂದ್ ಸಿಂಗ್ ಸಹಿ ಹಾಗೂ ಸೀಲ್ ಕೂಡ ಬಳಕೆ| ಪತ್ರದಲ್ಲಿ ಆಕ್ಷೇಪಾರ್ಹ ಹಾಗೂ ಬೆದರಿಕೆ ಪದ ಬಳಕೆ| ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಮಸೀದಿ ಮುಖಂಡರು|
ರಾಯಚೂರು(ಜ.18): ಬಳ್ಳಾರಿ ನಗರ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಹೆಸರಿನಲ್ಲಿ ಬೆದರಿಕೆ ಪತ್ರಗಳು ರಾಯಚೂರು ನಗರದ ಮಸೀದಿಗಳಿಗೆ ಬಂದಿವೆ. ಲೇಟರ್ನಲ್ಲಿ ಹೊಸಪೇಟೆ(ವಿಜಯನಗರ) ಬಿಜೆಪಿ ಶಾಸಕ ಆನಂದ್ ಸಿಂಗ್ ಸಹಿ ಹಾಗೂ ಸೀಲ್ ಕೂಡ ಬಳಕೆಯಾಗಿದೆ.
Add Asianetnews Kannada as a Preferred Source

ಅಂಬಾದೇವಿ ರಥೋತ್ಸವಕ್ಕೆ ಸ್ವಾಗತ ಕೋರುವವರು 'ಶ್ರೀಮತಿ ಸನ್ನಿ ಲಿಯೋನ್ ಯುವಕ ಮಂಡಳಿ'
ಉರ್ದು ಭಾಷೆಯ ಕನ್ನಡ ಅಕ್ಷರಗಳಲ್ಲಿ ಇರುವ ಪತ್ರಗಳು ನಗರದ ಹತ್ತಾರು ಮಸೀದಿಗಳಿಗೆ ಬಂದಿವೆ. ಪತ್ರದಲ್ಲಿ ಆಕ್ಷೇಪಾರ್ಹ ಹಾಗೂ ಬೆದರಿಕೆ ಪದಗಳನ್ನು ಬಳಸಲಾಗಿದೆ. ಈ ಪತ್ರದಲ್ಲಿ 16 ಅಂಶಗಳನ್ನು ಉಲ್ಲೇಖಿಸಲಾಗಿದೆ. ಈ ಸಂಬಂಧ ನಗರದ ವಿವಿಧ ಮಸೀದಿ ಮುಖಂಡರುಗಳಿಂದ ರಾಯಚೂರು ಪಶ್ಚಿಮ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.