Asianet Suvarna News Asianet Suvarna News

ಬೆಳಗಾವಿಯಲ್ಲಿ ಭಾರೀ ಮಳೆ; ಕೊಚ್ಚಿ ಹೋಗುತ್ತಿದ್ದ ಬೈಕ್ ಸವಾರನ ರಕ್ಷಣೆ

ಸವದತ್ತಿ ತಾಲ್ಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದೆ. ಉಕ್ಕಿ ಹರಿಯುತ್ತಿದ್ದ ಹಳ್ಳ ದಾಟಲು ಹೋದ ಬೈಕ್‌ ಸವಾರರು ಕೊಚ್ಚಿ ಹೋಗುವ ಅಪಾಯದಲ್ಲಿದ್ದರು. ಕೂಡಲೇ ಅಲ್ಲಿದ್ದ ಸ್ಥಳೀಯರು ಸವಾರರನ್ನು ರಕ್ಷಿಸಿದ್ದಾರೆ. 

ಬೆಳಗಾವಿ (ಸೆ. 21): ಸವದತ್ತಿ ತಾಲ್ಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದೆ. ಉಕ್ಕಿ ಹರಿಯುತ್ತಿದ್ದ ಹಳ್ಳ ದಾಟಲು ಹೋದ ಬೈಕ್‌ ಸವಾರರು ಕೊಚ್ಚಿ ಹೋಗುವ ಅಪಾಯದಲ್ಲಿದ್ದರು. ಕೂಡಲೇ ಅಲ್ಲಿದ್ದ ಸ್ಥಳೀಯರು ಸವಾರರನ್ನು ರಕ್ಷಿಸಿದ್ದಾರೆ. 

ಹೊರನಾಡು- ಕಳಸ ರಸ್ತೆ ಸಂಚಾರಕ್ಕೆ ಮುಕ್ತ; ತಗ್ಗಿದೆ ಹೆಬ್ಬಾಳೆ ಸೇತುವೆ ನೀರು

ಎಲ್ಲಮ್ಮ ದೇವಿ ದೇವಸ್ಥಾನದ ಸುತ್ತಮುತ್ತಲೂ ಭಾರೀ ನೀರು ನುಗ್ಗಿದೆ.  ಯಾರಾದರೂ ಈ ನೀರಿನ ರಭಸಕ್ಕೆ ಸಿಲುಕಿದರೆ ಅವರು ಸಿಗುವುದೇ ಅನುಮಾನ. ಅಷ್ಟು ರಭಸದಲ್ಲಿ ನೀರು ಹರಿಯುತ್ತಿದೆ. ಬೆಳಗಾವಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಜನರಲ್ಲಿ ಪ್ರವಾಹ ಭೀತಿ ಕಾಡುತ್ತಿದೆ.