ದೇವೇಗೌಡರ ಪ್ರೀತಿಗೆ ಕರಗಿದ ಜಿಟಿಡಿ: ಹೆಚ್‌ಡಿಕೆ ಸಂಧಾನಕ್ಕೆ ಬಗ್ಗದವರು ದೊಡ್ಡಗೌಡ್ರಿಗೆ ಶರಣು

ಶಾಸಕ ಜಿ.ಟಿ ದೇವೇಗೌಡ ಜೆಡಿಎಸ್ ಬಿಡಲಿದ್ದಾರೆ ಎಂಬ ಊಹಾಪೋಹಗಳಿಗೆ ಅಂತಿಮ ತೆರೆ ಬಿದ್ದಿದ್ದು, ಜಿಟಿಡಿ ಮನವೊಲಿಸಲು ಹೆಚ್.ಡಿ ದೇವೇಗೌಡರು ಯಶಸ್ವಿಯಾಗಿದ್ದಾರೆ. ಹೆಚ್‌ಡಿಕೆ ಸಂಧಾನಕ್ಕೆ ಬಗ್ಗದ ಜಿಟಿಡಿ, ದೇವೇಗೌಡರಿಗೆ ಶರಣಾಗಿದ್ದಾರೆ. 

Share this Video
  • FB
  • Linkdin
  • Whatsapp

ಜೆಡಿಎಸ್ ಬಿಟ್ಟವರು, ಬಿಡಲು ತುದಿಗಾಲಲ್ಲಿ ನಿಂತವರ ದೊಡ್ಡ ಲಿಸ್ಟೇ ಇದೆ. ಆದರೆ ಯಾರೇ ಪಕ್ಷ ಬಿಟ್ರೂ, ಕ್ಯಾರೇ ಅನ್ನದ ದೇವೇಗೌಡ್ರು, ಜಿಟಿಡಿ ಮನೆಗೆ ಹೋಗಿ ಮನವೊಲಿಸಿದ್ದಾರೆ. ಇದಕ್ಕೆ ಮೈಸೂರು ಭಾಗದಲ್ಲಿ ಅದರಲ್ಲಿಯೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿಟಿಡಿಗೆ ಇರುವ ಪ್ರಾಬಲ್ಯ ಕಾರಣವಾಗಿದೆ. ಈ ಮೂಲಕ ಸಿದ್ದರಾಮಯ್ಯಗೆ, ದೇವೇಗೌಡರು ಪೆಟ್ಟು ಕೊಟ್ಟಿದ್ದಾರೆ. ಹಾಗೂ ಶಾಸಕ ಜಿಟಿ ದೇವೇಗೌಡ ಮತ್ತು ತಮ್ಮ ಪುತ್ರ ಕುಮಾರಸ್ವಾಮಿ ನಡುವಿನ ವಿರಸವನ್ನು ಕೊನೆಗಾಣಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರ್ನಾಟಕದಲ್ಲಿ 1000 ಯುವಕರಿಗೆ ಕೇಂದ್ರ ನೌಕರಿ: ಪ್ರಹ್ಲಾದ್‌ ಜೋಶಿ

Related Video