
ಕೆರಳಿತು ಮಳೆ ನಲುಗಿತು ಕರ್ನಾಟಕ, ಹೆದ್ದಾರಿಗೆ ನುಗ್ಗಿ ಬಂದ ನೇತ್ರಾವತಿ.. ಕೆರಳಿದ ಕಾವೇರಿ..!
ಕೆರಳಿದ ಮಳೆಗೆ ನಲುಗಿದ ಕರ್ನಾಟಕ.. ರಾಜ್ಯದ ದಕ್ಷಿಣ ಭಾಗದಲ್ಲಿ ವರುಣದೇವ ರೌದ್ರಾವತಾರ ತೋರಿಸಿದ್ರೆ, ಉತ್ತರ ಭಾಗದ ಕಥೆಯೂ ಇದಕ್ಕಿಂತ ಭಿನ್ನವೇನಲ್ಲ. ಅಲ್ಲೂ ಮಳೆರಾಯ ತನ್ನ ಅಸಲಿ ವರಸೆ ತೋರಿಸಿದ್ದಾನೆ.
ರಾಜ್ಯದ ಉತ್ತರ ಧ್ರುವರಿಂದ ದಕ್ಷಿಣ ಧ್ರುವದವರೆಗೆ.. ಕರ್ನಾಟಕಕ್ಕೆ ಜಲ ದಿಗ್ಬಂಧನ ಹಾಕಿದ ವರುಣದೇವ..! ಶಿರಾಡಿ ಘಾಟ್’ನಲ್ಲಿ ಭೂಕುಸಿತಕ್ಕೆ ಕೆಸರಿನಲ್ಲಿ ಮುಳುಗಿದ ಲಾರಿ, ಕಾರುಗಳು.. ಕರಾವಳಿಯಲ್ಲಿ ಹೆದ್ದಾರಿಗೆ ನುಗ್ಗಿ ಬಂದ ನೇತ್ರಾವತಿ, ಕೊಡಗಿನಲ್ಲಿ ಕೆರಳಿದ ಕಾವೇರಿ..! ಮಲೆನಾಡಿನಲ್ಲಿ ಬೋಟ್ ಮೂಲಕ ಮನೆಯಿಂದ ಹೊರ ಬಂದು ಪ್ರಾಣ ಉಳಿಸಿಕೊಂಡ ಜನ.. ಮಹಾಮಳೆಗೆ ಬಲಿಯಾದ ಮೂಕಪ್ರಾಣಿಗಳು.. ರಣಮಳೆಯ ರಣಾರ್ಭಟಕ್ಕೆ ಜನಜೀವನ ಅಸ್ತವ್ಯಸ್ತ..! ಕುಂಭದ್ರೋಣ ಮಳೆ ರಾಜ್ಯದಲ್ಲಿ ಸೃಷ್ಠಿಸಿದ ಅವಾಂತರ, ಅನಾಹುತದ ಅನಾವರಣವೇ ಇವತ್ತಿನ ಸುವರ್ಣ ಸ್ಪೆಷಲ್
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ