Chikkamagaluru: ರಾಜ್ಯದ ಎರಡನೇ ಅತೀ ಉದ್ದದ ತೂಗುಸೇತುವೆ ಉದ್ಘಾಟನೆಗೆ ಸಿದ್ಧ

- ರಾಜ್ಯದ ಎರಡನೇ ಅತೀ ಉದ್ದದ ತೂಗುಸೇತುವೆ ಉದ್ಘಾಟನೆಗೆ ಸಿದ್ಧ- ಮಳೆಗಾಲದಲ್ಲಿ ಕೊಚ್ಚಿ ಹೋಗಿದ್ದ ಹ್ಯಾಂಗಿಂಗ್ ಬ್ರಿಡ್ಜ್ ಮತ್ತೆ ರೆಡಿ- ತೂಗುಸೇತುವೆ  ತಜ್ಞ ಗಿರೀಶ್ ಭಾರಧ್ವಾಜ್‌ರಿಂದ ನಿರ್ಮಾಣಕಾರ್ಯ

Share this Video
  • FB
  • Linkdin
  • Whatsapp

ಚಿಕ್ಕಮಗಳೂರು (ನ. 13): 2019ರಲ್ಲಿ ಸುರಿದ ಮಹಾಮಳೆಗೆ ಎನ್.ಆರ್.ಪುರ ತಾಲೂಕಿನ ಕುಗ್ರಾಮ ಬಾಳೆಗದ್ದೆ ಸೇತುವೆ ಕೊಚ್ಚಿ ಹೋಗಿತ್ತು. ಸೇತುವೆ ಕೊಚ್ಚಿ ಹೋಗಿದ್ದರಿಂದ ಹಳ್ಳಿಗರು ಹೊರ ಜಗತ್ತಿನ ಸಂಪರ್ಕವನ್ನೇ ಕಳೆದುಕೊಂಡಿದ್ದರು. ಮಕ್ಕಳು ಶಾಲೆಗೆ ಹೋಗಬೇಕೆಂದರೆ, ರೋಗಿಗಳು ಆಸ್ಪತ್ರೆಗೆ ಹೋಗಬೇಕೆಂದರೆ ಈ ಸೇತುವೆ ಮೂಲಕವೇ ಹೋಗಬೇಕು. ಸೇತುವೆ ಹೋದಾಗಿನಿಂದ ಈ ಕುಗ್ರಾಮದ ಜನ, ವಿದ್ಯಾರ್ಥಿಗಳು ಈ ಸಮಯದಲ್ಲಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಿಟಿಜಿಟಿ ಮಳೆ, ಮೈ ನಡುಗಿಸುವ ಚಳಿ, ಬೆಚ್ಚನೆ ಮಲಗಿದೆ ಸಿಲಿಕಾನ್ ಸಿಟಿ!

ಕೊನೆಗೆ ವಿಧಿಯಿಲ್ಲದೇ ಪ್ರಾಣದ ಹಂಗನ್ನ ತೊರೆದು ಬಿದಿರಿನ ತೆಪ್ಪದಲ್ಲಿ ಗ್ರಾಮದ ಪುಟಾಣಿಗಳು, ಜನರು 50-60 ಅಡಿ ಆಳವಿರುವ ಭದ್ರಾ ನದಿಯನ್ನ ದಾಟುತ್ತಿದ್ರು. ಆಮೇಲಾಮೇಲೆ ಅರಣ್ಯ ಇಲಾಖೆ ಬೋಟ್ ಮೂಲಕ ಜನರನ್ನ ದಡ ಮುಟ್ಟಿಸ್ತಿತ್ತು. ಇದೀಗ 2 ವರ್ಷದ ಬಳಿಕ ಸುಸಜ್ಜಿತ ತೂಗುಸೇತುವೆ ನಿರ್ಮಾಣವಾಗಿದೆ. ಎರಡು ವರ್ಷಗಳಿಂದ ಗ್ರಾಮಸ್ಥರು ಅನುಭವಿಸ್ತಿದ್ದ ಕಷ್ಟಕ್ಕೆ ಮುಕ್ತಿ ಸಿಕ್ಕಿದೆ. ಜೀವ ಕೈಯಲ್ಲಿಡಿದು ತೆಪ್ಪದಲ್ಲಿ ನದಿ ದಾಟುತ್ತಿದ್ದವರ ಮೊಗದಲ್ಲಿ ಮಂದಹಾಸ ಮೂಡಿದೆ.

Related Video