
BWSSB: ಕಾವೇರಿ ನೀರಿನಂತೆಯೇ ವಾಟರ್ ಬಿಲ್ ಸಹ ಸೋರಿಕೆ: ಭ್ರಷ್ಟರ ಪಾಲಾಗುತ್ತಿದೆ ಸಾರ್ವಜನಿಕರ ಹಣ
ಬೆಂಗಳೂರಿಗರೇ.. ನೀವು ವಾಟರ್ ಬಿಲ್ ಕಟ್ಟುವ ಮುನ್ನ ಎಚ್ಚರ ವಹಿಸಿ. ಯಾಕಂದ್ರೆ ನೀವು ಕಟ್ಟುವ ಹಣ, ಭ್ರಷ್ಟರ ಪಾಲಾಗುತ್ತಿದೆ.
ಬೆಂಗಳೂರಿನಲ್ಲಿ ಕಾವೇರಿ ನೀರಿನ ಬಿಲ್ ಹೆಸರಿನಲ್ಲಿ ಅಧಿಕಾರಿಗಳು ಹಗಲು ದರೋಡೆ ಮಾಡುತ್ತಿದ್ದಾರೆ. ಗ್ರಾಹಕರು ನೀಡುವ ವಾಟರ್ ಬಿಲ್ ಜಲಮಂಡಳಿಗೆ ಸೇರುತ್ತಲೇ ಇಲ್ಲ. ಕಾವೇರಿ ನೀರಿನಂತೆಯೇ ವಾಟರ್ ಬಿಲ್ ಸಹ ಸೋರಿಕೆ ಆಗ್ತಿದೆ. ಗ್ರಾಹಕರ ಐದು ಕೋಟಿಗೂ ಹೆಚ್ಚು ಹಣ ಜಲಮಂಡಳಿ ಕಚೇರಿಗೆ ಸೇರಿಲ್ಲ. ಹಣ ದುರುಪಯೋಗ ಮಾಡಿದ ಭ್ರಷ್ಟರ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. 2016ರಿಂದ ನಿರಂತರವಾಗಿ ಈ ಕಳ್ಳಾಟ ನಡೆಯುತ್ತಿದೆ. ಹಿರಿಯ ಅಧಿಕಾರಿಗಳ ಸಹಕಾರದೊಂದಿಗೆ ಸರ್ಕಾರಕ್ಕೆ ದೋಖಾ ಮಾಡಲಾಗಿದೆ.
Add Asianetnews Kannada as a Preferred Source
