'ಡಾ. ನಾಗರಾಜ್ ಜಮಖಂಡಿ ಸ್ಮಾರಕ ಮಾಧ್ಯಮ ಪ್ರಶಸ್ತಿ' ಪಡೆದ ಪ್ರಶಾಂತ್ ನಾತು
ಡಾ. ನಾಗರಾಜ್ ಜಮಖಂಡಿ ಮೆಮೊರಿಯಲ್ ಟ್ರಸ್ಟ್ನಿಂದ ಮಾಧ್ಯಮ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಬೆಂಗಳೂರಿನ ಕೊಂಡಜ್ಜ ಬಸಪ್ಪ ಸಭಾಂಗಣದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಮಾಡಲಾಯಿತು. ಸುವರ್ಣ ನ್ಯೂಸ್ ರಾಜಕೀಯ ವಿಶ್ಲೇಷಕ ಪ್ರಶಾಂತ್ ನಾತುಗೆ ಸಿಎಂ ಬಸವರಾಜ್ ಬೊಮ್ಮಾಯಿ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಡಾ. ನಾಗರಾಜ್ ಅವರು 2015ರಲ್ಲಿ ಅಗಲಿದ ನಂತರ ಕಾರ್ಯಕ್ರಮವನ್ನು ಮಾಡಿಕೊಂಡು ಬರಲಾಗುತ್ತಿದೆ. ಇನ್ನು ಇದೇ ವೇಳೆ ಸಂಜೆವಾಣಿ ಸಂಪಾದಕ ವಿ.ಪಿ ಮಲ್ಲಪ್ಪ ಅವರಿಗೆ ಕೂಡ ಸನ್ಮಾನ ಮಾಡಲಾಯಿತು.
Mandya News: ರೈತರ ಧರಣಿ ವಾಪಸ್ಗೆ ಕೈಮುಗಿದ ಶಾಸಕ ಕೆಸಿಎನ್