Asianet Suvarna News Asianet Suvarna News

ಹೈಕೋರ್ಟ್ ಚಾಟಿ, ಮಂಗಗಳ ಮಾರಣ ಹೋಮ ಸ್ಥಳಕ್ಕೆ ಅಧಿಕಾರಿಗಳ ಭೇಟಿ

* 30 ಮಂಗಗಳ ದಾರುಣ ಹತ್ಯೆ
* ಮೂಕ ಪ್ರಾಣಿಗಳ ಮೇಲೆ ಮಾನವನ ಪೈಶಾಚಿಕ ಕೃತ್ಯ
* ಹೈಕೋರ್ಟ್ ನಿರ್ದೇಶನ ಹಿನ್ನೆಲೆ ಚುರುಕಾದ ತನಿಖೆ
* ಘಟನಾ ಸ್ಥಳಕ್ಕೆ ಡಿಸಿ ಆರ್. ಗಿರೀಶ್,ಎಸ್ಪಿ ಶ್ರೀನಿವಾಸಗೌಡ, ಡಿಸಿಎಫ್ ಬಸವರಾಜ್ ಭೇಟಿ

ಹಾಸನ(ಜು. 31)  ಹಾಸನ ಜಿಲ್ಲೆಯಲ್ಲೊಂದು ದಾರುಣ ಘಟನೆ ನಡೆದಿದೆ.  ಮೂಕ ಪ್ರಾಣಿಗಳ ಮಾರಣ ಹೋಮ ಮಾಡಲಾಗಿದೆ. 30 ಮಂಗಗಳು ಸಾವು ಕಂಡಿದ್ದು 30 ಮಂಗಗಳ ಸ್ಥಿತಿ ಗಂಭೀರವಾಗಿದೆ. ಈ ಪ್ರಕರಣವನ್ನು ಹೈಕೋರ್ಟ್ ಗಂಭೀರವಾಗಿ ತೆಗೆದುಕೊಂಡಿದೆ.

ಹಾಸನದಲ್ಲಿ ಮಂಗಗಳ ಮಾರಣ ಹೋಮ

ಘಟನಾ ಸ್ಥಳಕ್ಕೆ ಡಿಸಿ ಆರ್. ಗಿರೀಶ್,ಎಸ್ಪಿ ಶ್ರೀನಿವಾಸಗೌಡ, ಡಿಸಿಎಫ್ ಬಸವರಾಜ್ ಭೇಟಿ ನೀಡಿದ್ದಾರೆ. ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದಿದ್ದಾರೆ. ತಾಲ್ಲೂಕಿನ ಚೌಡನಹಳ್ಳಿ ಬಳಿ ಕೊಂದಿದ್ದ  39 ಮಂಗಗಳ  ಚೀಲ ಕಟ್ಟಿ ಎಸೆಯಲಾಗಿತ್ತು.

Video Top Stories