Asianet Suvarna News Asianet Suvarna News

ಗ್ರಾಪಂ ಚುನಾವಣೆ ಬಹಿಷ್ಕರಿಸಲು ಈ ಗ್ರಾಮಸ್ಥರ ನಿರ್ಧಾರ: ಏನಿವರ ಬೇಡಿಕೆ..?

ಬಾಗಲಕೋಟೆಯ ರೊಳ್ಳಿ ಗ್ರಾಮಕ್ಕೆ ಕಳೆದ 5 ವರ್ಷಗಳಿಂದಲೂ ಜನಪ್ರತಿನಿಧಿಗಳೇ ಇಲ್ಲ. ಅಭಿವೃದ್ಧಿ ಕೆಲಸಗಳಂತೂ ಮರೀಚಿಕೆಯಾಗಿದೆ. ದೇಣಿಗೆಯಿಂದ ಊರಿನ ಅಭಿವೃದ್ಧಿ ಮಾಡ್ತಿದ್ದಾರೆ ಗ್ರಾಮಸ್ಥರು. 

ಬಾಗಲಕೋಟೆ (ಡಿ. 11): ಇಲ್ಲಿನ ರೊಳ್ಳಿ ಗ್ರಾಮಕ್ಕೆ ಕಳೆದ 5 ವರ್ಷಗಳಿಂದಲೂ ಜನಪ್ರತಿನಿಧಿಗಳೇ ಇಲ್ಲ. ಅಭಿವೃದ್ಧಿ ಕೆಲಸಗಳಂತೂ ಮರೀಚಿಕೆಯಾಗಿದೆ. ದೇಣಿಗೆಯಿಂದ ಊರಿನ ಅಭಿವೃದ್ಧಿ ಮಾಡ್ತಿದ್ದಾರೆ ಗ್ರಾಮಸ್ಥರು. ಹಾಗಾಗಿ ನಮಗೆ ಪ್ರತ್ಯೇಕ ಗ್ರಾಮ ಪಂಚಾಯತಿ ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಗ್ರಾಪಂ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಆ ಗ್ರಾಮದ ಸಮಸ್ಯೆ ಬಗ್ಗೆ, ಬೇಡಿಕೆ ಬಗ್ಗೆ ಅಲ್ಲಿನ ಗ್ರಾಮಸ್ಥರು ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.  ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕಿದೆ. 

ನಿಮ್ಮ ಬೇಡಿಕೆ ಈಡೇರಿಸಲು ಪ್ರಯತ್ನಿಸುತ್ತೇವೆ, ಪ್ರತಿಭಟನೆ ಕೈ ಬಿಡಿ: ಸಾರಿಗೆ ಸಚಿವರಿಂದ ಮನವಿ