Asianet Suvarna News Asianet Suvarna News

ಗಣೇಶೋತ್ಸವಕ್ಕೆ ಅನುಮತಿ ನೀಡಬೇಕು: ಬಸವರಾಜ ಹೊರಟ್ಟಿ

*  ಸಾರ್ವಜನಿಕ ಗಣೇಶೋತ್ಸವ ನಿಲ್ಲಿಸೋಕೆ ಆಗಲ್ಲ
*  ಕೋವಿಡ್‌ ನಿಯಮಗಳನ್ನ ಪಾಲನೆ ಮಾಡಿಕೊಂಡು ಆಚರಿಸಲು ಅನುಮತಿ ನೀಡಬೇಕು
*  ಗಣೇಶೋತ್ಸವ ಸಂಪೂರ್ಣ ನಿಷೇಧ ಬದಲು ಕಠಿಣ ನಿಬಂಧನೆ ಜಾರಿ
 

ಹಾವೇರಿ(ಆ.30): ಸಾರ್ವಜನಿಕ ಗಣೇಶೋತ್ಸವಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಬೇಕು ಅಂತ ಸಭಾಪತಿ ಬಸವರಾಜ ಹೊರಟ್ಟಿ ಅವರು ಆಗ್ರಹಿಸಿದ್ದಾರೆ. ಸಾರ್ವಜನಿಕ ಗಣೇಶೋತ್ಸವ ನಿಲ್ಲಿಸೋಕೆ ಆಗಲ್ಲ, ಅದ್ಧೂರಿಯಾಗಿ ಆಚರಿಸೋದು ಬೇಡ, ಕೋವಿಡ್‌ ನಿಯಮಗಳನ್ನ ಪಾಲನೆ ಮಾಡಿಕೊಂಡು ಆಚರಿಸಲು ಅನುಮತಿ ನೀಡಬೇಕು ಅಂತ ಹೇಳಿದ್ದಾರೆ. ಜನರು ಗುಂಪು ಸೇರದ ಹಾಗೆ ಸರ್ಕಾರ ಕ್ರಮವಹಿಸಬೇಕು. ಗಣೇಶೋತ್ಸವ ಸಂಪೂರ್ಣ ನಿಷೇಧದ ಬದಲು ಕಠಿಣ ನಿಬಂಧನೆಗಳನ್ನ ಜಾರಿಗೆ ತರಬೇಕು ಅಂತ ತಿಳಿಸಿದ್ದಾರೆ. 

ಶ್ರೀಕೃಷ್ಣನ ನಗರಿ ಉಡುಪಿಯಲ್ಲಿ ಅಷ್ಟಮಿ ಸಂಭ್ರಮ : ಏನೇನಿದೆ ಸ್ಪೆಷಲ್..?

Video Top Stories