Glucose For Crops : ರೋಗ ಪೀಡಿತ ಬೆಳೆಗಳಿಗೆ ಗ್ಲೂಕೋಸ್ : ಬಳ್ಳಾರಿ ರೈತರಿಂದ ಹೊಸ ಪ್ರಯೋಗ

ಅನಾರೋಗ್ಯದಿಂದ ಸುಸ್ತಾಗಿರುವ ವ್ಯಕ್ತಿಗೆ ಗ್ಲೂಕೋಸ್ ಕೊಡೋದು ಸಾಮಾನ್ಯ ಆದರೆ ಇಲ್ಲಿ ಬೆಳೆಗಳಿಗೆ ಗ್ಲೂಕೋಸ್ ನೀಡಲಾಗುತ್ತಿದೆ. ಬೆಳೆಗಳನ್ನು ಉಳಿಸಿಕೊಳ್ಳಲು ಈ ರೀತಿ ಗ್ಲೂಕೋಸ್ ಸ್ಪ್ರೇ ಮಾಡಲಾತ್ತಿದೆ.

Share this Video
  • FB
  • Linkdin
  • Whatsapp

 ಬಳ್ಳಾರಿ (ನ.30): ಅನಾರೋಗ್ಯದಿಂದ ಸುಸ್ತಾಗಿರುವ ವ್ಯಕ್ತಿಗೆ ಗ್ಲೂಕೋಸ್ (Glucose) ಕೊಡೋದು ಸಾಮಾನ್ಯ ಆದರೆ ಇಲ್ಲಿ ಬೆಳೆಗಳಿಗೆ ಗ್ಲೂಕೋಸ್ ನೀಡಲಾಗುತ್ತಿದೆ. ಬೆಳೆಗಳನ್ನು (Crops) ಉಳಿಸಿಕೊಳ್ಳಲು ಈ ರೀತಿ ಗ್ಲೂಕೋಸ್ ಸ್ಪ್ರೇ ಮಾಡಲಾತ್ತಿದೆ. ರಾಜ್ಯದಲ್ಲಿ ಕೆಲ ದಿನಗಳಿಂದ ಭಾರಿ ಮಳೆ (Heavy Rain) ಸುರಿಯುತ್ತಿದ್ದು,ಅಕಾಲಿಕ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಇದರಿಂದ ಬೆಳೆಗಳು ಕೊಳೆಯುತ್ತಿದ್ದು, ಬೆಳೆಗಳನ್ನುಉಳಿಸಿಕೊಳ್ಳಲು ಗ್ಲೂಕೋಸ್ ಸ್ಪ್ರೇ ಮಾಡಲಾಗುತ್ತದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Karnataka rain Effect : ಬೆಳೆ ಕಳೆದುಕೊಂಡ ರೈತರಿಗೆ ಅತಿ ಕಡಿಮೆ ಪರಿಹಾರ!

ಜಿಲ್ಲೆಯಲ್ಲಿ (Ballary) ಅಪಾರ ಪ್ರಮಾಣದ ಮಳೆಯಿಂದ ಮೆಣಸಿನ ಕಾಯಿ ಬೆಳೆ ಕೊಳೆಯುತ್ತಿದ್ದು, ಜೊತೆಗೆ ವಿವಿಧ ರೋಗವೂ ಕಾಡುತ್ತಿದೆ. ಇದರ ನಿಯಂತ್ರಣದ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ. ಆದರೆ ಇದರಿಂದ ರೈತರ ಬೆಳೆ ಕೈ ಹಿಡಿಯುವುದೋ ಇಲ್ಲವೋ ಎನ್ನುವುದು ಮಾತ್ರ ಖಾತ್ರಿ ಇಲ್ಲ. ಒಟ್ಟಿನಲ್ಲಿ ತಮ್ಮ ಬೆಳೆ ಉಳಿಸಿಕೊಳ್ಳಲ ವಿವಿಧ ರೀತಿಯ ಯತ್ನಗಳನ್ನು ನಡೆಸುತ್ತಲೇ ಇದ್ದಾರೆ. 

Related Video