
ಹಾವೇರಿ: ಎತ್ತುಗಳಂತೆ ಎಡೆಕುಂಟೆಗೆ ಹೆಗಲು ಕೊಟ್ಟ ಬಡ ರೈತ ದಂಪತಿ..!
* ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಎಫೆಕ್ಟ್
* ಟ್ರ್ಯಾಕ್ಟರ್ ಸೇರಿದಂತೆ ಕೃಷಿ ಯಂತ್ರಗಳ ಬಾಡಿಗೆ ದುಪ್ಪಟ್ಟು
* ಎತ್ತುಗಳ ಬಾಡಿಯೂ ಹೆಚ್ಚಳ
ಹಾವೇರಿ(ಜು.22): ಕೃಷಿ ಯಂತ್ರೋಪಕರಣಗಳು ಸಿಗದೆ ರೈತ ಕಂಗಾಲಾದ ಘಟನೆ ಕೃಷಿ ಸಚಿವ ಬಿ.ಸಿ. ಪಾಟೀಲ್ರ ಸ್ವಂತ ಜಿಲ್ಲೆಯಲ್ಲಿ ನಡೆದಿದೆ. ಹೌದು, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಟ್ರ್ಯಾಕ್ಟರ್ ಸೇರಿದಂತೆ ಕೃಷಿ ಯಂತ್ರಗಳ ಬಾಡಿಗೆ ದುಪ್ಪಟ್ಟು ಆಗಿದೆ. ಇತ್ತ ಎತ್ತುಗಳ ಬಾಡಿಯೂ ಹೆಚ್ಚಳವಾಗಿದೆ. ಹೀಗಾಗಿ ಬಾಡಿಗೆಗೆ ಸಿಕ್ಕರೂ ಅಷ್ಟು ದುಡ್ಡು ತರುವಂತ ಯೋಗ್ಯತೆಯೂ ಇಲ್ಲಿನ ರೈತರಿಗೆ ಇಲ್ಲದಾಗಿದೆ. ಹೀಗಾಗಿ ಅಸಹಾಕರಾದ ಬಡ ಕುಟುಂಬವೊಂದು ತನ್ನ ಪುಟ್ಟ ಕಂದಮ್ಮನ ಜೊತೆ ಎತ್ತುಗಳ ಹಾಗೆ ನೊಗ ಹೊತ್ತು ಉಳುಮೆ ಮಾಡುತ್ತಿದ್ದಾರೆ.
Add Asianetnews Kannada as a Preferred Source
