
ಚಿಕ್ಕಮಗಳೂರು: ಈರುಳ್ಳಿ ಬೆಳೆದ ರೈತರು ಕಂಗಾಲು, ಕಣ್ಣೀರಲ್ಲೇ ಕೈತೊಳೆಯುತ್ತಿರುವ ಅನ್ನದಾತ
* ವ್ಯಾಪಾರಸ್ಥರಿಲ್ಲದೇ ಚೀಲದಲ್ಲೇ ಕೊಳೆಯುತ್ತಿರೋ ಈರುಳ್ಳಿ
* ಇಳುವರಿಯೂ ಇಲ್ಲ, ವಾಡಿಕೆಯಂತೆ ಮಳೆಯೂ ಇಲ್ಲ, ಬೆಲೆಯೂ ಇಲ್ಲ
* ಎಪಿಎಂಸಿ ಕಾಯ್ದೆ ಜಾರಿಗೆ ತಂದಿದ್ದೇ ತಂದಿದ್ದು, ರೈತರಿಗೆ ಮರಣ ಶಾಸನ
ಚಿಕ್ಕಮಗಳೂರು(ಅ.02): ಅತ್ತ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದೇವೆ ರೈತರ ಬಾಳು ಬಂಗಾರ ಅಂತಿದೆ. ಇತ್ತ ರೈತರು ರಾಜಕಾರಣಿಗಳೆಲ್ಲಾ ವಿಷ ಕುಡಿದು ಸತ್ತು ಹೋಗಲಿ, ಹೊಸ ಸರ್ಕಾರವಾದ್ರು ಬಂದು ನಮ್ಮನ್ನ ಉಳಿಸಲಿ ಇಲ್ಲ ನಮಗೆ ಒಂದು ತೊಟ್ಟು ವಿಷ ತಂದು ಕೊಡಲಿ ಅಂತಿದ್ದಾರೆ. ಜನರಿಗೆ ಊಟ ಕೊಡೋಕೆ ಆಗ್ತಿಲ್ಲ. ಊಟದ ಬದಲು ಮಂಡಕ್ಕಿ ಕೊಡ್ತಿದ್ದೇವೆ. ನಮ್ಮ ಗೋಳು ಕೇಳೋರಿಲ್ಲ. ಈ ಸುಖಕ್ಕೆ ಸರ್ಕಾರ ಏಕೆ ಅಂತ ರೈತರು ಸರ್ಕಾರಕ್ಕೆ ಸೂಸೈಡ್ ಮಾಡಿಕೊಳ್ಳುವಂತೆ ಆಗ್ರಹಿಸಿದ್ದಾರೆ. ಹಾಗಾದ್ರೆ, ರೈತರ ಈ ಆಕ್ರೋಶ ಕಾರಣವೇನು ಅಂತೀರಾ.ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.
Add Asianetnews Kannada as a Preferred Source

ಸಿಂದಗಿ, ಹಾನಗಲ್ ಬೈ ಎಲೆಕ್ಷನ್ಗೆ ಜೆಡಿಎಸ್ನಿಂದ ಮುಸ್ಲಿಂ ಅಭ್ಯರ್ಥಿ: ಸಿದ್ದು, ಎಚ್ಡಿಕೆ ವಾಕ್ಸಮರ