Asianet Suvarna News Asianet Suvarna News

Bidar| ಮಹಿಳೆಯರ ಸಬಲೀಕರಣವೇ ನಮ್ಮ ಮುಖ್ಯಗುರಿ: ಡಾ.ವೀರೇಂದ್ರ ಹೆಗ್ಗಡೆ

*  ಸ್ವಸಹಾಯ ಎಂದರೆ ನಮ್ಮನ್ನು ನಾವು ಸಹಾಯ ಮಾಡಿಕೊಂಡು ಅಭಿವೃದ್ಧಿಪಥದತ್ತ ಸಾಗಬೇಕು
*  ನಮ್ಮ ಟ್ರಸ್ಟ್‌ನಿಂದ ಅನ್ನದಾನ, ಜ್ಞಾನದಾನ, ಔಷಧ ದಾನ 
*  ಡಾ. ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ಸ್ವಸಹಾಯ ಸಂಘಗಳ ಸಮಾವೇಶ 
 

ಬೀದರ್‌(ನ.12): ನಗರದ ಬೂಮರೆಡ್ಡಿ ಕಾಲೇಜಿನ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಟ್ರಸ್ಟ್‌ನಿಂದ ಡಾ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಸ್ವಸಹಾಯ ಸಂಘಗಳ ಸಮಾವೇಶ ನಡೆಯಿತು. ಸ್ವಸಹಾಯ ಸಂಘದ ಮೂಲಕ ಸಾಧನೆ ಮಾಡಿದ ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗೆ ಗೌರವ ಸಲ್ಲಿಸಲಾಯಿತು. 

Ramanagar : ನಿಧಿಗಾಗಿ ಮಹಿಳೆಯನ್ನು ಬೆತ್ತಲೆಗೊಳಿಸಿ ವಾಮಾಚಾರ

ಈ ವೇಳೆ ಮಾತನಡಿದ ಡಾ. ವೀರೇಂದ್ರ ಹೆಗ್ಗಡೆ ಅವರು, ಸ್ವಸಹಾಯ ಎಂದರೆ ನಮ್ಮನ್ನು ನಾವು ಸಹಾಯ ಮಾಡಿಕೊಂಡು ಅಭಿವೃದ್ಧಿಪಥದತ್ತ ಸಾಗಬೇಕು. ನಮ್ಮ ಟ್ರಸ್ಟ್‌ನಿಂದ ರಾಜ್ಯಾದ್ಯಂತ ಅನೇಕ ಜನಪರ ಕಾರ್ಯಗಳನ್ನ ಮಾಡಿದ್ದೇವೆ. ಪ್ರಮುಖವಾಗಿ ಅನ್ನದಾನ, ಜ್ಞಾನದಾನ, ಔಷಧ ದಾನ ಮಾಡುವಂತ ಕೆಲಸಗಳನ್ನ ಮಾಡಲಾಗಿದೆ. ಪ್ರಮುಖವಾಗಿ ಮಹಿಳೆಯರ ಸಬಲೀಕರಣವೇ ನಮ್ಮ ಮುಖ್ಯಗುರಿಯಾಗಿದೆ ಎಂದು ಹೇಳಿದ್ದಾರೆ. 
 

Video Top Stories