Asianet Suvarna News Asianet Suvarna News

ಅತಿವೃಷ್ಟಿಗೆ ನಲುಗಿದ ಧಾರವಾಡ: ಪ್ರವಾಹ ಸಂತ್ರಸ್ತರ ಪರ ಸಂತೋಷ್ ಲಾಡ್ ಹೋರಾಟ

 ಭಾರೀ ಮಳೆ, ಪ್ರವಾಹಕ್ಕೆ ಧಾರವಾಡ ಜಿಲ್ಲೆಯ ಕಲಘಟಗಿ ಮತ್ತು ಅಳ್ನಾವರ ತಾಲೂಕುಗಳಲ್ಲಿ ಅಪಾರ ಹಾನಿಯಾಗಿದೆ. ಇಲ್ಲಿನ ಹುಲಿಕೆರೆ ಡ್ಯಾಂಗೆ ಹಾನಿಯಾಗಿದ್ದು ಲೋಕೋಪಯೋಗಿ ಇಲಾಖೆಗೆ ಬರೋಬ್ಬರಿ 20 ಕೋಟಿ, ನೀರಾವರಿ ಇಲಾಖೆಗೆ 30 ಕೋಟಿ ನಷ್ಟವಾಗಿದೆ.

ಧಾರವಾಡ (ಆ. 11): ಭಾರೀ ಮಳೆ, ಪ್ರವಾಹಕ್ಕೆ ಉತ್ತರ ಕರ್ನಾಟಕ ಭಾಗ ನಲುಗಿದೆ. ಧಾರವಾಡ ಜಿಲ್ಲೆಯ ಕಲಘಟಗಿ ಮತ್ತು ಅಳ್ನಾವರ ತಾಲೂಕುಗಳಲ್ಲಿ ಅಪಾರ ಹಾನಿಯಾಗಿದೆ. ಇಲ್ಲಿನ ಹುಲಿಕೆರೆ ಡ್ಯಾಂಗೆ ಹಾನಿಯಾಗಿದ್ದು ಲೋಕೋಪಯೋಗಿ ಇಲಾಖೆಗೆ ಬರೋಬ್ಬರಿ 20 ಕೋಟಿ, ನೀರಾವರಿ ಇಲಾಖೆಗೆ 30 ಕೋಟಿ ನಷ್ಟವಾಗಿದೆ.

ಬೊಮ್ಮಾಯಿ ಕ್ಯಾಬಿನೆಟ್‌ನಿಂದ ಆನಂದ್ ಸಿಂಗ್ ಔಟ್..?

ಈ ಭಾಗಕ್ಕೆ ಮಾಜಿ ಸಚಿವ ಸಂತೋಷ್ ಲಾಡ್ ಭೇಟಿ ನೀಡಿ, ಪ್ರವಾಹ ಸಂತ್ರಸ್ತರ ಕಷ್ಟಗಳನ್ನು ಆಲಿಸಿದ್ದಾರೆ. ಪರಿಹಾರ ಕಾರ್ಯಕ್ಕಾಗಿ ಹೋರಾಟ ಶುರು ಮಾಡಿದ್ದಾರೆ. ಅಲ್ಲಿನ ಪರಿಸ್ಥಿತಿ, ಸಂತ್ರಸ್ತರ ಕಷ್ಟ, ಮುಂದಿನ ಹೋರಾಟಗಳ ಬಗ್ಗೆ ಸಂತೋಷ್ ಲಾಡ್ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.