Asianet Suvarna News Asianet Suvarna News

ಸಹಾಯ ಕೇಳಿಬಂದ ಬಡವರನ್ನು ಓಡಿಸಿದ ಕಾಂಗ್ರೆಸ್ ಶಾಸಕ!

  • ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಬಡವರ ಮೇಲೆ ಶಾಸಕನ ದರ್ಪ
  • ನೆರವು ಕೇಳಿದಕ್ಕೆ ಗರಂ ಆದ ಬೈಲಹೊಂಗಲ ಕಾಂಗ್ರೆಸ್ ಶಾಸಕ ಮಹಾಂತೇಶ್ ಕೌಜಲಗಿ
  • ಲಾಕ್‌ಡೌನ್‌ ಮುಗಿದಿದೆ, ಹೋಗಿ ಕೆಲಸ ಮಾಡಿ ಎಂದ ಶಾಸಕ ಮಹಾಶಯ 

ಬೆಳಗಾವಿ (ಮೇ 07): ರಾಜಕಾರಣಿಗಳದ್ದು ಬಣ್ಣ ಪರಿಸ್ಥಿತಿಗೆ ತಕ್ಕಂತೆ ಬದಲಾಗುತ್ತದೆ. ಚುನಾವಣೆ ವೇಳೆ ವರಸೆ ಬೇರೆ ಇರುತ್ತೆ, ಕಷ್ಟದ ಸಮಯದಲ್ಲಿ ಬೇರೆಯಾಗುತ್ತೆ.  ಅದಕ್ಕೆ ಉದಾಹರಣೆಯೆಂಬಂತೆ ಶಾಸಕರೊಬ್ಬರು ವರ್ತಿಸಿದ್ದಾರೆ. 

ಇದನ್ನೂ ನೋಡಿ | ಕೊರೋನಾ ವಾರಿಯರ್ ಲೇಡಿ PSI ಮೇಲೆ ಬಿಜೆಪಿ ಮುಖಂಡನ ದರ್ಪ...

ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಬಡವರ ಮೇಲೆ ಶಾಸಕ ಬೈಲಹೊಂಗಲ ಕಾಂಗ್ರೆಸ್ ಶಾಸಕ ಮಹಾಂತೇಶ್ ಕೌಜಲಗಿ ದರ್ಪ ತೋರಿದ್ದಾರೆ. ನೆರವು ಕೇಳಿದಕ್ಕೆ ಗರಂ ಆದ ಕೌಜಲಗಿ, ಲಾಕ್‌ಡೌನ್‌ ಮುಗಿದಿದೆ, ಹೋಗಿ ಕೆಲಸ ಮಾಡಿ ಎಂದು ಬಡಪಾಯಿಗಳನ್ನು ಓಡಿಸಿದ್ದಾರೆ.

ರಾಜ್ಯದಲ್ಲಿ ಕೊರೋನಾ ಹರಡಲು ಕಾರಣ ಏನ್ ಗೊತ್ತಾ?