Asianet Suvarna News Asianet Suvarna News

ಸಿದ್ದೇಶ್ವರ ಶ್ರೀಗಳು ಆರೋಗ್ಯವಾಗಿ ಬರುತ್ತಾರೆ: ಸಿಎಂ ಬೊಮ್ಮಾಯಿ

ವಿಜಯಪುರದ ಸಿದ್ದೇಶ್ವರ ಶ್ರೀಗಳನ್ನು ಭೇಟಿಯಾದಾಗ ನನ್ನನ್ನು ಗುರುತಿಸಿದ್ರು ಎಂದು ಶ್ರೀಗಳ ಆರೋಗ್ಯದ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಪ್ರಧಾನಿ ನರೇಂದ್ರ ಮೋದಿಗೆ ನಮಸ್ಕರಿಸಿ ಶುಭ ಹಾರೈಸಿದ್ದಾರೆ‌. ಶ್ರೀಗಳ ಚಿಕಿತ್ಸೆಯ ಎಲ್ಲಾ ಮಾಹಿತಿಗಳನ್ನು ತರಿಸಿಕೊಳ್ಳುತ್ತಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಅಂತರ್ಗತ ಶಕ್ತಿಯಿಂದಾಗಿ ಆರೋಗ್ಯವಾಗಿ ಬರುತ್ತಾರೆ. ದೀರ್ಘ ಕಾಲದವರೆಗೆ ನಮ್ಮ ಜೊತೆ ಇರುತ್ತಾರೆ. ಜ್ಞಾನ ಯೋಗಾಶ್ರಮದಲ್ಲಿ ಶ್ರೀಗಳಿಗೆ ಚಿಕಿತ್ಸೆ ಮುಂದುವರೆದಿದೆ ಎಂದರು. ವೈದ್ಯರ ಚಿಕಿತ್ಸೆಗೆ ಸಿದ್ದೇಶ್ವರ ಶ್ರೀಗಳು ಸ್ಪಂದಿಸುತ್ತಿದ್ದು, ಶ್ರೀಗಳ ಚೇತರಿಕೆಗೆ ಭಕ್ತರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

Assembly Elections 2023 : ಬಿಜೆಪಿಯ 'ಹೊಸ' ರಣತಂತ್ರ: ಅಮಿತ್ ಶಾ ಕೊ ...

Video Top Stories