Asianet Suvarna News Asianet Suvarna News

ಬಲಿ ತೆಗೆದುಕೊಂಡ ರಕ್ಕಸ ರಾಜಕಾಲುವೆ: ಬಿಬಿಎಂಪಿಗೆ ಇನ್ನೆಷ್ಟು ಜನರ ಪ್ರಾಣ ಬೇಕು?

ಬೆಂಗಳೂರು ನಗರದ ಹಲವು ಕಡೆಗಳಲ್ಲಿ ರಾಜಕಾಲುವೆಗಳು, ಜನರ ಪ್ರಾಣವನ್ನು ಬಲಿಪಡೆಯಲು ಬಾಯ್ತೆರದು ಕಾಯುತ್ತಿವೆ. ಹಾಗೂ ಈಗಾಗಲೇ ಕೆಲವೊಂದೆಡೆ ಬಲಿಯನ್ನು ತೆಗೆದುಕೊಂಡಿವೆ. ಈ ಬಗ್ಗೆ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಬೇಕಿದ್ದ ಬಿಬಿಎಂಪಿ ಮಾತ್ರ, ತಲೆ ಕೆಡಿಸಿಕೊಳ್ಳುತ್ತಿಲ್ಲ.
 

ನಗರದ ನೆಲೆಗೆದರನಹಳ್ಳಿಯ ಮುಖ್ಯ ರಸ್ತೆಯಲ್ಲಿರುವ ರುಕ್ಮಿಣಿ ನಗರದಲ್ಲಿ ರಾಜಕಾಲುವೆಗೆ ಕಾಲು ಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಬಿಬಿಎಂಪಿ ನಿರ್ಲಕ್ಷ್ಯದಿಂದ ಕೂಲಿ ಕೆಲಸಕ್ಕಾಗಿ ಊರು ಬಿಟ್ಟು ಬೆಂಗಳೂರಿಗೆ ಬಂದ ವ್ಯಕ್ತಿ ಇದೀಗ ಹೆಣವಾಗಿದ್ದಾನೆ. ಇಷ್ಟೆಲ್ಲಾ ನಡೆದರೂ ಕೂಡ  ಬಿಬಿಎಂಪಿ ತನಗೇನು ಗೊತ್ತೇ ಇಲ್ಲ ಎಂಬಂತೆ ವರ್ತಿಸುತ್ತಿದೆ. ಸ್ಲ್ಯಾಬ್ ಓಪನ್ ಆಗಿರುವ ಕಾರಣ ಅಲ್ಲಿನ ಸಾರ್ವಜನಿಕರು ನಿತ್ಯ ಜೀವ ಕೈಯಲ್ಲಿ ಹಿಡಿದು, ಸಂಚರಿಸುವ  ಪರಿಸ್ಥಿತಿ ನಿರ್ಮಾಣವಾಗಿದೆ.

ಒಂದೇ ವರ್ಷದಲ್ಲಿ 9 ಸಾವಿರ ಹೆಕ್ಟೇರಲ್ಲಿ ಅಡಕೆ ಬೆಳೆ ವಿಸ್ತರಣೆ!
 

Video Top Stories