Asianet Suvarna News Asianet Suvarna News

ಲಾಕ್‌ಡೌನ್‌: ಬಾಗಲಕೋಟೆಯಲ್ಲಿ ಆಸ್ಪತ್ರೆಗಳು ಬಂದ್‌, ರೋಗಿಗಳ ಪರದಾಟ

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಆಸ್ಪತ್ರೆಗಳು ಬಂದ್‌| ಇದರಿಂದ ರೋಗಿಗಳ ಪರದಾಟ| ಸುವರ್ಣ ನ್ಯೂಸ್‌ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಆಸ್ಪತ್ರೆಗಳ ಮುಖವಾಡ ಬಯಲು|

ಬಾಗಲಕೋಟೆ(ಏ.15): ಲಾಕ್‌ಡೌನ್‌ ಇರುವ ಹಿನ್ನೆಲೆಯಲ್ಲಿ ನಗರದಲ್ಲಿರುವ ಹಲವಾರು ಆಸ್ಪತ್ರೆಗಳು ಬಂದ್‌ ಆಗಿವೆ. ಇದರಿಂದ ಸಾಕಷ್ಟು ರೋಗಿಗಳು ಸಂಕಷ್ಟವನ್ನ ಎದುರಿಸುತ್ತಿದ್ದಾರೆ. ಈ ಸಂಬಂಧ ಸುವರ್ಣ ನ್ಯೂಸ್‌ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಆಸ್ಪತ್ರೆಗಳ ಮುಖವಾಡಗಳು ಒಂದೊಂದಾಗಿ ಹೊರಬರುತ್ತಿವೆ. 

ರೋಗಿಗಳು ಗೋಗರೆದರೂ ಚಿಕಿತ್ಸೆ ಮಾತ್ರ ಸಿಗ್ತಾಯಿಲ್ಲ; ಏನಿದು ಆಸ್ಪತ್ರೆ ವ್ಯವಸ್ಥೆ?

ವಿ.ಎನ್‌ ದೇಸಾಯಿ ಎಂಬ ಆಸ್ಪತ್ರೆಗೆ ಕರೆ ಮಾಡಿ ನಮ್ಮ ತಂದೆಗೆ ಸೀರಿಯಸ್‌ ಇದೆ ಚಿಕಿತ್ಸೆ ಕೊಡಿ ಎಂದು ಗೋಗರೆದರೂ ಆಸ್ಪತ್ರೆಯ ಸಿಬ್ಬಂದಿ ಮಾತ್ರ ವೈದ್ಯರ ಮೊಬೈಲ್‌ ನಂಬರ್ ಕೊಡಲು ನಿರಾಕರಿಸಿದ್ದಾರೆ. ಬೇರೆ ಆಸ್ಪತ್ರೆ ಓಪನ್ ಇದೆ ಅಲ್ಲಿಗೆ ಹೋಗಿ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ.