Asianet Suvarna News Asianet Suvarna News

ಬಾದಾಮಿ: ಕಲಾವಿದರ ಬದುಕು ಕಸಿದುಕೊಂಡ ಕೊರೋನಾ ಮಹಾಮಾರಿ

ಕೊರೋನಾ ಹಿನ್ನೆಲೆಯಲ್ಲಿ ಬನಶಂಕರಿ ಜಾತ್ರೆ ರದ್ದು| ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿರುವ ಬನಶಂಕರಿ ದೇವಸ್ಥಾನ| ಪ್ರತಿವರ್ಷ ಒಂದೂವರೆ ತಿಂಗಳ ಕಾಲ ನಡೆಯುತ್ತಿದ್ದ್ ಐತಿಹಾಸಿಕ ಜಾತ್ರೆ| 

ಬಾಗಲಕೋಟೆ(ಡಿ.13): ಪ್ರತಿ ವರ್ಷ ನೂರಾರು ಜನ ರಂಗಭೂಮಿ ಕಲಾವಿದರಿಗೆ ವರದಾನವಾಗಿದ್ದ ಐತಿಹಾಸಿಕ ಬಾದಾಮಿಯ ಬನಶಂಕರಿ ಜಾತ್ರೆ ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ರದ್ದಾಗಿದ್ದು, ಇದೀಗ ರಂಗಭೂಮಿ ಕಲಾವಿದರ ಬದುಕು ಬೀದಿಗೆ ಬಂದು ನಿಲ್ಲುವಂತಾಗಿದೆ. 

ಕುಮಾರಸ್ವಾಮಿ ಪರ ಸಿಎಂ ಬ್ಯಾಟಿಂಗ್: ಕುತೂಹಲ ಮೂಡಿಸಿದ ರಾಜ್ಯ ರಾಜಕಾರಣ

ಪ್ರತಿವರ್ಷ ಒಂದೂವರೆ ತಿಂಗಳ ಕಾಲ ದುಡಿದು ವರ್ಷವಿಡಿ ಬದುಕಿಗೆ ಆಸರೆಯಾಗುತ್ತಿದ್ದ ಜಾತ್ರೆ ರದ್ದಾಗಿದ್ದರಿಂದ ಕಲಾವಿದರು ಕಣ್ಣೀರಿಡುತ್ತಿದ್ದಾರೆ. ನಾಟಕ ಪ್ರದರ್ಶನಕ್ಕೆ ಅವಕಾಶ ಕೊಡಿ ಅಂತ ಸುವರ್ಣನ್ಯೂಸ್​ ಮೂಲಕ ಗೋಗರೆಯುತ್ತಿದ್ದಾರೆ. ಈ ಕುರಿತ ವರದಿ ಇಲ್ಲಿದೆ.