
ಕೋಲಾರದಲ್ಲೊಂದು ಡೆಡ್ಲಿ ಶಾಲೆ: ಜೀವಭಯದಲ್ಲೇ ಮಕ್ಕಳಿಗೆ ಪಾಠ!
ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು ಸರ್ಕಾರಕ್ಕೆ ಬೇಡವಾಯ್ತಾ ಎಂಬ ಪ್ರಶ್ನೆ ಪೋಷಕರನ್ನ ಕಾಡುತ್ತಿದೆ. ಇದಕ್ಕೆ ಕಾರಣ ಇಲ್ಲಿನ ಸರ್ಕಾರಿ ಶಾಲೆಗಳ ದುರಸ್ತಿಗೆ ಅನುದಾನ ಬಿಡುಗಡೆ ಮಾಡದೆ, ಶಿಕ್ಷಣ ಇಲಾಖೆ ನಿರ್ಲಕ್ಷ್ಯ ಮಾಡುತ್ತಿರುವ ಆರೋಪ ಕೇಳಿಬರುತ್ತಿದೆ.
ಕೋಲಾರ (ನ.29): ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು ಸರ್ಕಾರಕ್ಕೆ ಬೇಡವಾಯ್ತಾ ಎಂಬ ಪ್ರಶ್ನೆ ಪೋಷಕರನ್ನ ಕಾಡುತ್ತಿದೆ. ಇದಕ್ಕೆ ಕಾರಣ ಇಲ್ಲಿನ ಸರ್ಕಾರಿ ಶಾಲೆಗಳ ದುರಸ್ತಿಗೆ ಅನುದಾನ ಬಿಡುಗಡೆ ಮಾಡದೆ, ಶಿಕ್ಷಣ ಇಲಾಖೆ ನಿರ್ಲಕ್ಷ್ಯ ಮಾಡುತ್ತಿರುವ ಆರೋಪ ಕೇಳಿಬರುತ್ತಿದೆ. ಹೌದು! ಕೋಲಾರದ ಶ್ರೀನಿವಾಸಪುರದಲ್ಲಿರುವ ಸರ್ಕಾರಿ ಶಾಲೆಯ ಮಕ್ಕಳು ಆಲದ ಮರದ ಕೆಳಗೆ, ಕಲ್ಯಾಣಿ ಪಕ್ಕ ಕುಳಿತು ಪಾಠ ಕೇಳುವ ಪರಿಸ್ಥಿ ತಿ ಇದೆ. ಶಿಥಿಲವಾದ ಶಾಲಾ ಕಟ್ಟಡ, ಬಿರುಕು ಬಿಟ್ಟಿರುವ ಗೋಡೆಗಳು ಭಯ ಹುಟ್ಟಿಸುವಂತಿದೆ. ಆದರೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಕಂಪ್ಲಿಟ್ ಮಾಹಿತಿಗಾಗಿ ಈ ವಿಡಿಯೋವನ್ನು ವೀಕ್ಷಿಸಿ.
Add Asianetnews Kannada as a Preferred Source
