Asianet Suvarna News Asianet Suvarna News

ಪೌರ ಕಾರ್ಮಿಕ ಮಹಿಳೆಯಿಂದ ಧ್ವಜಾರೋಹಣ ನೆರವೇರಿಸಿದ ಸಿ.ಟಿ ರವಿ

 ಚಿಕ್ಕಮಗಳೂರಿನ ಅಜಾದ್‌ಪಾರ್ಕ್‌ನಲ್ಲಿ ಸಚಿವ ಸಿ.ಟಿ ರವಿ ಪೌರ ಕಾರ್ಮಿಕ ಮಹಿಳೆ ನಾಗಮ್ಮ ಅವರಿಂದ ಧ್ವಜರೋಹಣ ಮಾಡಿಸಿದರು. 

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ 75ನೇ ಸ್ವಾತಂತ್ರೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಚಿಕ್ಕಮಗಳೂರಿನ ಅಜಾದ್‌ಪಾರ್ಕ್‌ನಲ್ಲಿ ಸಚಿವ ಸಿ.ಟಿ ರವಿ ಪೌರ ಕಾರ್ಮಿಕ ಮಹಿಳೆ ನಾಗಮ್ಮ ಅವರಿಂದ ಧ್ವಜರೋಹಣ ಮಾಡಿಸಿದರು. ನಂತರ ನಗರದಲ್ಲಿ ತ್ರಿವರ್ಣ ಧ್ವಜದ ಬೃಹತ್ ಮೆರವಣಿಗೆ ನಡೆಯಿತು. ಎರಡು ಸಾವಿರಕ್ಕೂ ಅಧಿಕ ಜನ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಾವಿರಾರು ಜನ ತಾಯಿ ಭಾರತಿಗೆ ಜಯಘೋಷವನ್ನು ಕೂಗುವ ಮೂಲಕ ತಮ್ಮ ದೇಶಭಕ್ತಿಯನ್ನು ಸಾರಿದರು