
ಐವರ ಜಾಲಕ್ಕೆ ಸಿಲುಕಿದ ಡಿ-ಗ್ಯಾಂಗ್..ತಪ್ಪಿಸಿಕೊಳ್ಳೋದು ಡೌಟ್? ಕೊಲೆ ಕೇಸ್ಗೆ ಶಕ್ತಿ ತುಂಬಿದ ಸಿಎಂ..!
ರೀಲ್ ಹೀರೋ ದರ್ಶನ್ನನ್ನು ಬಂಧಿಸಿದ ರಿಯಲ್ ಹೀರೋಸ್..!
ದರ್ಶನ್ ಬಂಧನಕ್ಕೆ ಪಕ್ಕಾ ಪ್ಲಾನ್ ಮಾಡಿದ್ದ ದಕ್ಷ ಅಧಿಕಾರಿಗಳು
ಡಿಸಿಪಿ ಗಿರೀಶ್, ಎಸಿಪಿ ಚಂದನ್ ಕುಮಾರ್ ಕಾರ್ಯಕ್ಕೆ ಶ್ಲಾಘನೆ
ನಟ ದರ್ಶನ್(Actor Darshan) ಮತ್ತು ಗ್ಯಾಂಗ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ(Renukaswamy murder case) ಬಂಧನವಾಗಿದ್ದು, ಈಗಾಗಲೇ 19 ಆರೋಪಿಗಳನ್ನು ಬಂಧಿಸಲಾಗಿದೆ. ಇವರ ಬಂಧನಕ್ಕೆ 21 ಸಾಕ್ಷಿಗಳನ್ನು ಕಲೆ ಹಾಕಲಾಗಿದೆ. ಇವರ ಬಂಧನಕ್ಕೆ ಮುಂದಾಗಿದ್ದವರು ಐವರು ಸೂಪರ್ ಪೊಲೀಸ್ ಅಧಿಕಾರಿಗಳು. ಅಲ್ಲದೇ ಈ ಪ್ರಕರಣದಲ್ಲಿ ಯಾರೂ ಒತ್ತಡ ಹೇರಬಾರದು ಎಂದು ಸಿಎಂ ಸಿದ್ದರಾಮಯ್ಯ(Siddaramaiah) ವಾರ್ನ್ ಸಹ ಮಾಡಿದ್ದಾರೆ. ಇನ್ನೂ ಈ ಪ್ರಕರಣವನ್ನು ಮುಚ್ಚಿಹಾಕಲು ಹಲವರು ಪ್ರಭಾವಿ ನಾಯಕರು ಒತ್ತಡವನ್ನು ಹೇರುತ್ತಿದ್ದಾರೆ ಎಂದು ತಿಳಿದುಬಂದಿದೆ. ನಟ ದರ್ಶನ್ನನ್ನು ಮೈಸೂರಿನಲ್ಲಿ ಬಂಧಿಸಿದ್ದು ಎಸಿಪಿ ಚಂದನ್ ಕುಮಾರ್. ಮೃತ ಕುಟುಂಬಕ್ಕೆ ನ್ಯಾಯ ಕೊಡಿಸಲು SSP ನೇಮಕ ಮಾಡಲಾಗಿದೆ. ಅಲ್ಲದೇ ಪ್ರಸನ್ನ ಕುಮಾರ್ ಹೆಸರು ಕೇಳಿ ಡಿ ಬಾಸ್-ಗ್ಯಾಂಗ್ ಶಾಕ್ ಕೂಡ ಆಗಿದೆ.
Add Asianetnews Kannada as a Preferred Source

ಇದನ್ನೂ ವೀಕ್ಷಿಸಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣ ತನಿಖೆ ಬಳಿಕ ವರದಿ ಬರುತ್ತೆ, ಕಾನೂನು ಕ್ರಮ ಆಗುತ್ತೆ: ಗೃಹ ಸಚಿವ ಜಿ. ಪರಮೇಶ್ವರ್