Asianet Suvarna News Asianet Suvarna News

ತಮಿಳುನಾಡಿನಲ್ಲಿ ವಕ್ಫ್ ಆಸ್ತಿ ಕಬಳಿಸಿದ ಬೆನ್ನಲ್ಲೇ ಅಲರ್ಟ್ ಆದ ಯೋಗಿ , ಕೆರಳಿದ ಒವೈಸಿ!

ಬೆಚ್ಚಿ ಬೀಳಿಸುವ ವಕ್ಫ್ ಬೋರ್ಡ್ ಆಸ್ತಿ ಕಬಳಿಕೆ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಯೋಗಿ ಆದಿತ್ಯನಾಥ್ ಸಮೀಕ್ಷೆ ಆದೇಶಿಸಿದ್ದಾರೆ. ಇತ್ತ ಭಾರತ್ ಜೋಡೋ ಯಾತ್ರೆಯಲ್ಲಿ ವೀರ ಸಾವರ್ಕರ್ ಫೋಟೋ, ಮೊಹಮ್ಮದ್ ನಳಪಾಡ್ ಮಾತಿಗೆ ಕಾಂಗ್ರೆಸ್ ಹೈರಾಣು,  ಕಾಂಗ್ರೆಸ್‌ನಿಂದ ಪೇಸಿಎಂ ಅಭಿಯಾನ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ. 

ತಮಿಳುನಾಡಿನಲ್ಲಿ ವಕ್ಫ್ ಆಸ್ತಿ ಕಬಳಿಕೆ ಭಾರಿ ಸಂಚಲನ ಸೃಷ್ಟಿಸಿದೆ. 7 ಹಳ್ಳಿ, 1500 ವರ್ಷ ಹಳೆಯ ದೇವಸ್ಥಾನವನ್ನೇ ವಕ್ಫ್ ಗುಳುಂ ಮಾಡಿದೆ. ಇದರ ಬೆನ್ನಲ್ಲೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಲರ್ಟ್ ಆಗಿದ್ದಾರೆ.  ಉತ್ತರ ಪ್ರದೇಶದಲ್ಲಿನ ವಕ್ಫ್ ಆಸ್ತಿ ಸಮೀಕ್ಷೆಗೆ ಆದೇಶ ನೀಡಿದ್ದಾರೆ. ಇದು ಎಐಎಂಐಎ ಪಕ್ಷದ ಮುಖಂಡ ಅಸಾದುದ್ದೀನ್ ಓವೈಸಿಯನ್ನು ಕೆರಳಿಸಿದೆ. ಈ ಹಗ್ಗಜಗ್ಗಾಟದ ಬೆನ್ನಲ್ಲೇ   2014ರ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಅಂದಿನ ಪ್ರದಾನಿ ಮನ್‌ಮೋಹನ್ ಸಿಂಗ್, ದೆಹಲಿಯ ಸಂಸತ್ತಿನ ಸುತ್ತಲಿರುವ 123 ಸ್ಥಳಗಳನ್ನು ಗೌಪ್ಯವಾಗಿ ವಕ್ಭ್ ಬೋರ್ಡ್‌ಗೆ ಬರೆದುಕೊಟ್ಟಿರುವ ದಾಖಲೆಗಳು ಬಹಿರಂಗವಾಗಿದೆ. ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Video Top Stories