ಮೋದಿ ನಂತರ ಯಾರು?ಸತ್ಯವಾಗುತ್ತಾ ವಿಪಕ್ಷ ನಾಯಕರ ಭವಿಷ್ಯವಾಣಿ?


ಕೇಸರಿ ಪಾಳಯದ ಮುಂದೆ ಇರುವ ದೊಡ್ಡ ಪ್ರಶ್ನೆ ಏನು ಗೊತ್ತಾ? ಪ್ರಧಾನಿ ಮೋದಿ ನಂತರ ಬಿಜೆಪಿಯ ಉಸ್ತುವಾರಿ ಯಾರು ಅನ್ನೋದು? ಮುಂದಿನ ಪ್ರಧಾನಿ ಪ್ರಶ್ನೆಗೆ ಜನ ಕೊಟ್ಟ ಉತ್ತರ ಏನು ಅನ್ನೋದು ಗೊತ್ತಾಗ್ಬೇಕಾ?
 

Share this Video
  • FB
  • Linkdin
  • Whatsapp

ನವದೆಹಲಿ (ಆ.24): ಸರ್ಕಾರ ನಡೆಸ್ತಿರೋ ಕೇಸರಿ ಪಾಳಯಕ್ಕೆ ದೊಡ್ಡದೊಂದು ಚಿಂತೆ ಕಾಡುತ್ತಿದೆ. ಅದೊಂದು ಪ್ರಶ್ನೆಗೆ ಉತ್ತರ ಕಂಡುಕೊಳ್ಳೋಕೆ, ಭಾರತೀಯ ಜನತಾ ಪಕ್ಷ ಮಾತ್ರವೇ ಅಲ್ಲ, ದೇಶವೇ ಕಾಯುತ್ತಿದೆ.

ಆ ಪ್ರಶ್ನೆ ಏನಪ್ಪಾ ಅಂದ್ರೆ, ಮೋದಿ ನಂತರ ಯಾರು ಅನ್ನೋದು.. ಅಮಿತ್ ಶಾ.. ಯೋಗಿ ಆದಿತ್ಯನಾಥ್, ನಿತಿನ್ ಗಡ್ಕರಿ ಅಥವಾ ಇವರ್ಯಾರೂ ಅಲ್ಲದೆ, ಅಚ್ಚರಿಯ ಮತ್ತೊಬ್ಬರು, ಯಾರಾಗ್ತಾರೆ ನೆಕ್ಸ್ಟ್ ಪಿಎಮ್ ಅಂತ ದೊಡ್ಡ ಮಟ್ಟದಲ್ಲೇ ಚರ್ಚೆ ಆರಂಭವಾಗಿದೆ.

ಮೂಡ್‌ ಆಫ್‌ ದಿ ನೇಷನ್‌ ಸಮೀಕ್ಷೆ: ಟಾಪ್‌ 5 ಸ್ಥಾನದಲ್ಲೂ ಇಲ್ಲ ಸಿಎಂ ಸಿದ್ದರಾಮಯ್ಯ!

ಅದನ್ನ ಪತ್ತೆ ಹಚ್ಚೋಕೆ ಅಂತಲೇ ಇತ್ತೀಚಿಗೊಂದು ಸರ್ವೆ ನಡೀತು.. ಆ ಸರ್ವೆ, ಮೂಡ್ ಆಫ್ ದಿ ನೇಷನ್ ಯಾರ ಕಡೆಗಿದೆ ಅನ್ನೋದನ್ನ ಪತ್ತೆ ಪಾಡೋ ಪ್ರಯತ್ನ ಮಾಡ್ತು.. ಉತ್ತರಾಧಿಕಾರಿಯ ನಿಗೂಢ ರಹಸ್ಯವನ್ನೂ ಬಯಲು ಮಾಡ್ತು.. ಹಾಗಾದ್ರೆ, ಯಾರಂತೆ ಕಮಲ ಪಾಳಯದ ಉತ್ತರಾಧಿಕಾರಿ..?

Related Video