
Operation Ganga : ಹಿಮದ ನೀರು ಕುಡಿದು ಬದುಕಿದ್ದೇವೆ!
* ರಷ್ಯಾ-ಉಕ್ರೇನ್ ಸಮರಾಂಗಣ
* ಆಪರೇಷನ್ ಗಂಗಾ ಅಂತಿಮ ಹಂತಕ್ಕೆ
* ಉಕ್ರೇನ್ ನಿಂದ ಸುರಕ್ಷಿತವಾಗಿ ಬಂದಿಳಿದ ವಿದ್ಯಾರ್ಥಿಗಳು
ನವದೆಹಲಿ(ಮೇ 11) ಭಾರತದ ಆಪರೇಶನ್ ಗಂಗಾ (Operation Ganga) ಕೊನೆ ಹಂತಕ್ಕೆ ಬಂದಿದ್ದು ಕರ್ನಾಟಕದ (Karnataka) ವಿದ್ಯಾರ್ಥಿಗಳು (Students) ದೆಹಲಿಗೆ ಆಗಮಿಸಿದ್ದಾರೆ. ಉಕ್ರೇನ್ ನಲ್ಲಿ ಅನುಭವಿಸಿದ ಸಂಕಷ್ಟಗಳನ್ನು ಅವರೇ ತೆರೆದಿರಿಸಿದ್ದಾರೆ.
ಉಕ್ರೇನ್ ಮತ್ತು ರಷ್ಯಾದ ಸಮರ ಮುಂದುವರಿದೆ ಇದೆ. ಉಕ್ರೇನ್ ನ (Russia Ukraine War) ಬಹುತೇಕ ನಗರಗಳು ಧ್ವಂಸವಾಗಿದ್ದು ಜನರು ಆಶ್ರಯ ಪಡೆದು ಪರ್ಯಾಯ ಆಯ್ಕೆ ಆರಿಸಿಕೊಂಡಿದ್ದಾರೆ. ಪರಿಸ್ಥಿತಿಯಲ್ಲಿ ಯಾವ ಬದಲಾವಣೆ ಆಗಿಲ್ಲ. ಹಿಮದ ನೀರನ್ನೇ ಬಳಸಬೇಕಾದ ಪರಿಸ್ಥಿತಿಯನ್ನು ತಿಳಿಸಿದ್ದಾರೆ.