
ದಮನಕಾರಿ ಶಕ್ತಿಗಳ ಆಟ ಬಹಳ ದಿನ ನಡೆಯಲ್ಲ.. ಸೋಮನಾಥದ ಇತಿಹಾಸ ಗೊತ್ತಲ್ಲ!
* ವಿನಾಶಕಾರಿ ಶಕ್ತಿಗಳು ಜಾಸ್ತಿ ದಿನ ಬಾಳುವುದಿಲ್ಲ!
* ಸೋಮನಾಥ ದೇವಾಲಯದ ಸಂಗತಿ ಉಲ್ಲೇಖಿಸಿದ ಪ್ರಧಾನಿ ಮೋದಿ
*ತಾಲೀಬಾನಿಗಳ ಪರವಾಗಿ ಬ್ಯಾಟ್ ಬೀಸುವವರು ನಮ್ಮಲ್ಲೇ ಇದ್ದಾರೆ
*ಅಫ್ಘಾನಿಸ್ತಾನದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರು
ಬೆಂಗಳೂರು(ಆ. 20) ವಿನಾಶಕಾರಿ ಶಕ್ತಿಗಳು ಜಾಸ್ತಿ ದಿನ ಬಾಳುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸೋಮನಾಥ ದೇವಾಲಯದ ಉದಾಹರಣೆಯನ್ನು ನೀಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರ ನೆರವಿಗೆ ಸಹಾಯವಾಣಿ
ಉರ್ದು ಕವಿ ಮುನ್ನಾವರ ರಾಣಾ ತಾಲೀಬಾನಿಗಳ ಪರವಾಗಿ ಮಾತನಾಡಿದ್ದಾರೆ. ಇವರು ಮಾತ್ರ ಅಲ್ಲ ಅನೇಕರು ಅದು ಯಾವ ಕಾರಣಕ್ಕೋ ಗೊತ್ತಿಲ್ಲ ದೊಡ್ಡ ಸಹಾನುಭೂತಿ ತೋರಿಸುತ್ತಿದ್ದಾರೆ. ಅಫ್ಘಾನಿಸ್ತಾನ ತಾಲೀಬಾನಿಗಳ ವಶವಾಗಿದೆ. ಬಳ್ಳಾರಿಯ, ಬೆಂಗಳೂರು, ತೀರ್ಥಹಳ್ಳಿ, ಮಂಗಳೂರಿನ ವ್ಯಕ್ತಿಗಳು ತಾಲೀಬಾನಿಗಳ ಕೈಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಅಫ್ಘಾನಿಸ್ತಾನದ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ಮೊದಲು ಭಾರತದಲ್ಲಿ ವಾಸಿಸಿರುವ ಅಲ್ಪಸಂಖ್ಯಾತರ ಮೇಲೆ ಗಮನ ಹರಿಸಿ ಎಂದು ಹೇಳಿದ್ದಾರೆ.ಇದಕ್ಕೆ ಶೋಭಾ ಕರಂದ್ಲಾಜೆ ತಿರುಗೇಟು ಕೊಟ್ಟಿದ್ದಾರೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ