Asianet Suvarna News Asianet Suvarna News

ಅಫ್ಘನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರಿಗೆ ಸಹಾಯವಾಣಿ

* ಅಫ್ಘಾನಿಸ್ತಾನದಲ್ಲಿ ಕನ್ನಡಿಗರು ಅತಂತ್ರ
* ರಾಜ್ಯದಿಂದ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ
* ಅಗತ್ಯ ಇರುವವರು ಅವರ ಸಂಪರ್ಕ ಮಾಡಬಹುದು
* ಕೇಂದ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿ ಇರುತ್ತಾರೆ

ಬೆಂಗಳೂರು(ಆ.20)  ಅಫ್ಘಾನಿಸ್ತಾನದಲ್ಲಿ ಕನ್ನಡಿಗರು ಅತಂತ್ರವಾಗಿದ್ದಾರೆ ಎಂಬ ವಿಚಾರಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ವಿವರಣೆ ಕೊಟ್ಟಿದ್ದಾರೆ,. ರಾಜ್ಯ ಸರ್ಕಾರ ನೋಡಲ್ ಅಧಿಕಾರಿಯನ್ನು ನೇಮಕ ಮಾಡಿದ್ದು ಅಗತ್ಯ ಇರುವವರು ಸಂಪರ್ಕ ಮಾಡಬಹುದು ಎಂದಿದ್ದಾರೆ.

ಗನ್ ಹಿಡಿದು ಉಗ್ರರ ಪಥಸಂಚಲನ

ಕೇಂದ್ರ ಸರ್ಕಾರ ಭಾರತೀಯರ ಹಿತ ಕಾಪಾಡುವ ಕೆಲಸ ಮಾಡುತ್ತಿದೆ. ಕೇಂದ್ರದೊಂದಿಗೆ ಸಂಪರ್ಕದಲ್ಲಿದ್ದು ಮಾಹಿತಿ ನೀಡಲಾಗಿದೆ. ಅಗತ್ಯ ಇರುವವರು ಸಂಪರ್ಕ ಮಾಡಬಹುದು ಎಂದು ಗೃಹ ಸಚಿವರು ತಿಳಿಸಿದ್ದಾರೆ.  ತಾಲೀಬಾನಿಗಳು ಅಫ್ಘಾನ್ ವಶಪಡಿಸಿಕೊಂಡಿದ್ದು  ಅಲ್ಲಿ ಸಿಲುಕಿರುವ ಭಾರತೀಯರನ್ನು ಏರ್ ಲಿಫ್ಟ್ ಮೂಲಕ ಕರೆಸಿಕೊಳ್ಳಲಾಗಿದೆ.

 

Video Top Stories