
'ಒಂದು ವಾರದಿಂದ ಮಗನನ್ನು ಕರೆತರಲು ಅಂಗಲಾಚಿದೆ, ಕೊನೆಗೂ ನನ್ನ ಮಗ ಜೀವಂತವಾಗಿ ಬರಲೇ ಇಲ್ಲ'
ಒಂದು ವಾರದಿಂದ ಮಗನನ್ನು ಕರೆತರಲು ಅಂಗಲಾಚಿದೆ. ಕೊನೆಗೂ ನನ್ನ ಮಗ ಜೀವಂತವಾಗಿ ಬರಲೇ ಇಲ್ಲ ಎಂದು ಮೃತ ನವೀನ್ ತಂದೆ ಶೇಖರಗೌಡ ಕಣ್ಣೀರು ಹಾಕುತ್ತಿದ್ದಾರೆ. ನಾವು ನಮ್ಮ ಮಗನನ್ನು ಕಳೆದುಕೊಂಡಿದ್ದೇವೆ. ಬೇರೆ ಮಕ್ಕಳಿಗೂ ಹೀಗಾಗೋದು ಬೇಡ. ಉಳಿದ ಮಕ್ಕಳಾದರೂ ಸುರಕ್ಷಿತವಾಗಿ ತಾಯ್ನಾಡು ಸೇರಲಿ ಎಂದು ತಮ್ಮ ನೋವಿನಲ್ಲೂ ನವೀನ್ ತಂದೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಹಾವೇರಿ(ಮಾ.02): ಒಂದು ವಾರದಿಂದ ಮಗನನ್ನು ಕರೆತರಲು ಅಂಗಲಾಚಿದೆ. ಕೊನೆಗೂ ನನ್ನ ಮಗ ಜೀವಂತವಾಗಿ ಬರಲೇ ಇಲ್ಲ ಎಂದು ಮೃತ ನವೀನ್ ತಂದೆ ಶೇಖರಗೌಡ ಕಣ್ಣೀರು ಹಾಕುತ್ತಿದ್ದಾರೆ. ನಾವು ನಮ್ಮ ಮಗನನ್ನು ಕಳೆದುಕೊಂಡಿದ್ದೇವೆ. ಬೇರೆ ಮಕ್ಕಳಿಗೂ ಹೀಗಾಗೋದು ಬೇಡ. ಉಳಿದ ಮಕ್ಕಳಾದರೂ ಸುರಕ್ಷಿತವಾಗಿ ತಾಯ್ನಾಡು ಸೇರಲಿ ಎಂದು ತಮ್ಮ ನೋವಿನಲ್ಲೂ ನವೀನ್ ತಂದೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
Add Asianetnews Kannada as a Preferred Source

ಚೆನ್ನಾಗಿ ಓದಿದರೂ ಮಗನಿಗೆ ಇಲ್ಲಿ ವೈದ್ಯಕೀಯ ಸೀಟು ಸಿಗಲಿಲ್ಲ, ಸಾಲ ಮಾಡಿ ಉಕ್ರೇನ್ಗೆ ಓದಲು ಕಳುಹಿಸಿದರೆ ಡಾಕ್ಟರ್ ಆಗಿ ಬರಬೇಕಾದವನು ಹೆಣವಾಗಿ ಬರುತ್ತಿದ್ದಾನೆಂದು ನೊಂದು ಕಣ್ಣೀರು ಹಾಕುತ್ತಿದ್ದಾರೆ ನವೀನ್ ತಂದೆ.