Asianet Suvarna News Asianet Suvarna News

News Hour ನೂಪುರ್ ಹೇಳಿಕೆ ಖಂಡಿಸಿ 10 ರಾಜ್ಯಗಳಲ್ಲಿ ಹಿಂಸಾಚಾರ,ರಾಜ್ಯದಲ್ಲಿ ಭದ್ರತೆ ಹೆಚ್ಚಳ!

  • ರಾಜ್ಯದಲ್ಲೂ ಮುಸ್ಲಿಮರ ಪ್ರತಿಭಟನೆ, ಅಲರ್ಟ್ ಆದ ಪೊಲೀಸರು
  • ಕಾಂಗ್ರೆಸ್ ಹಠಕ್ಕೆ ಬಿಜೆಪಿಗೆ ಗೆಲುವು, ಯಾರು ಬಿ ಟೀಂ ಪ್ರಶ್ನಿಸಿದ ಕುಮಾರಸ್ವಾಮಿ
  • 16 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 8ರಲ್ಲಿ ಬಿಜೆಪಿಗೆ ಗೆಲುವು

ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ನಿಂದಿಸಿದ್ದಾರೆ ಅನ್ನೋ ಆರೋಪದಡಿ ಮುಸ್ಲಿಮರು ಆರಂಭಿಸಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. 10 ರಾಜ್ಯಗಳಲ್ಲಿ ಕೋಮು ಸಂಘರ್ಷವೇ ನಡೆದಿದೆ. ಹಲವರು ಬಲಿಯಾಗಿದ್ದಾರೆ. ನೂಪುರ್ ಶರ್ಮಾ ಹೇಳಿಕೆ ಖಂಡಿಸಿ ರಾಜ್ಯದ ಕೆಲ ಭಾಗದಲ್ಲಿ ಪ್ರತಿಭಟನೆ ಕಿಚ್ಚು ಆರಂಭಗೊಂಡಿದೆ. ಆದರೆ ರಾಜ್ಯದಲ್ಲಿ ಪೊಲೀಸರು ಅಲರ್ಟ್ ಆಗಿದ್ದು, ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ